ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಶ್ವದ ನಂ-1 ಪಟ್ಟಕ್ಕೇರಲು ನಮಗೇಕೆ ಸಾಧ್ಯವಿಲ್ಲ?: ಆಡ್ವಾಣಿ (Advani | Hampi | BJP | Yeddyurappa | Sri krishna devaraya)
Bookmark and Share Feedback Print
 
ಇಡೀ ದಕ್ಷಿಣ ಭಾರತವನ್ನು ತನ್ನದಾಗಿಸಿ, ವಿಜಯನಗರ ಸಾಮ್ರಾಜ್ಯದ ರಾಜನಾಗಿ ಮೆರೆಯುವುದು ಶ್ರೀಕೃಷ್ಣದೇವರಾಯನಿಗೆ ಸಾಧ್ಯವಾಗಿದ್ದರೆ, ಈ ಶತಮಾನದಲ್ಲಿ ನಮಗೆ ಏಕೆ ಜಗತ್ತಿನ ದೊಡ್ಡಣ್ಣನಾಗಲು ಸಾಧ್ಯವಿಲ್ಲ?ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಪ್ರಶ್ನಿಸಿದ್ದಾರೆ.

ಅವರು ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಹೋತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ದೇಶಭಕ್ತರ ಬಲಿದಾನವನ್ನು ನೋಡಿದ ನಮ್ಮ ದೇಶ ಉನ್ನತ ಸ್ಥಾನಕ್ಕೆ ಹೋಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಅದು ಸುಳ್ಳಾಯಿತು. ಉತ್ತಮ ಆಡಳಿತ ದೊರೆಯುವುದು ಕೂಡ ಸಾಧ್ಯವಾಗಿಲ್ಲ. ಅದರಿಂದ ಅಭಿವೃದ್ಧಿ ಹೊಂದಲು ಕಷ್ಟವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಭಯ, ಪರಾಕ್ರಮಗಳನ್ನು ತನ್ನ ಜೀವವಿರುವವರೆಗೂ ಪಾಲಿಸಿಕೊಂಡು ಬಂದಾತ ಶ್ರೀಕೃಷ್ಣದೇವರಾಯ ಎಂದು ಬಣ್ಣಿಸಿದ ಆಡ್ವಾಣಿ, ಆತನ ಆಡಳಿತ, ದೂರದರ್ಶಿತ್ವ ನಮಗೆ ಮಾದರಿಯಾಗಬೇಕು ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ