ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಈಶ್ವರಪ್ಪ ಆಯ್ಕೆಗೆ ಅಸಮಾಧಾನವಿಲ್ಲ : ಕಾರಜೋಳ (Ishwarappa | Karajola | BJP | Yeddyurappa | Nithin)
Bookmark and Share Feedback Print
 
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಕೆ.ಎಸ್.ಈಶ್ವರಪ್ಪ ಅವರನ್ನು ಆಯ್ಕೆ ಮಾಡಿರುವುದು ತಮಗೆ ಅಸಮಾಧಾನ ತಂದಿಲ್ಲ ಎಂದು ಹೇಳಿರುವ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ, ಪಕ್ಷ ಹಾಗೂ ಸರ್ಕಾರದಲ್ಲಿ ಪರಿಶಿಷ್ಟರಿಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎನ್ನುವುದನ್ನು ಅಲ್ಲಗೆಳೆದಿದ್ದಾರೆ.

ಇಲ್ಲಿನ ಮುಧೋಳದಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದಾದರೂ ಹುದ್ದೆಗೆ ಒಬ್ಬರನ್ನು ನೇಮಕ ಮಾಡುವಾಗ ಕೆಲವರಿಗೆ ಅಸಮಾಧಾನವಾಗುವುದು ಸಹಜ. ಆದರೆ ಅದನ್ನೇ ನಮಗೆ ಅವಕಾಶ ನೀಡಿಲ್ಲ ಎನ್ನುವುದು ತಪ್ಪು ಎಂದರು.

ಪರಿಶಿಷ್ಟ ಜಾತಿಯ ಮಂತ್ರಿಗಳು ಹಾಗೂ ಶಾಸಕರು ಸಭೆ ನಡೆಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ, ಆ ಸಭೆಯ ಬಗ್ಗೆ ತಮಗೇನು ತಿಳಿದಿಲ್ಲ, ನಾನು ಸಭೆಗೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೇ ತಾವು ಆ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ ಗಡ್ಕರಿ ಅವರ ಜೊತೆಯಲ್ಲಿಯೇ ಇದ್ದುದಾಗಿ ತಿಳಿಸಿದರು
ಸಂಬಂಧಿತ ಮಾಹಿತಿ ಹುಡುಕಿ