ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಿರಿಯೂರು: ಬಿಸಿಯೂಟ ಸೇವಿಸಿ 60ವಿದ್ಯಾರ್ಥಿಗಳು ಅಸ್ವಸ್ಥ (BJP | Yedddyurappa | Hiriyooru | Karnataka | Bangalore)
Bookmark and Share Feedback Print
 
ಬಿಸಿಯೂಟ ಸೇವಿಸಿ ತಾಲೂಕಿನ ಆದಿವಾಲ ಗ್ರಾಮದ ಪ್ರಾಥಮಿಕ ಶಾಲೆಯ 60 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ವಿದ್ಯಾರ್ಥಿಗಳನ್ನು ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ತೀವ್ರ ಅಸ್ವಸ್ಥಗೊಂಡ 9 ವಿದ್ಯಾರ್ಥಿಗಳನ್ನು ಹಿರಿಯೂರು ಆಸ್ಪತ್ರೆಗೆ ಸೇರಿಸಲಾಗಿದೆ.

ಸಾಂಬಾರಿಗೆ ಬಳಸುವ ಕಡ್ಲೆಕಾಳು ಬೂಸ್ಟ್ ಹಿಡಿದಿದ್ದವು ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅಲ್ಲದೆ ತಾಲೂಕಿನಾದ್ಯಂತ ಸರಬರಾಜಾದ ಕಡ್ಲೆಕಾಳು ಹಾಗೂ ತರಕಾರಿ ಕಳಪೆ ಗುಣಮಟ್ಟದ್ದು. ಈ ಸಂಬಂಧ ಮೊದಲೇ ಶಿಕ್ಷಕರಿಂದ ದೂರು ಬಂದಿತ್ತು. ಸೂಕ್ತ ಕ್ರಮಕ್ಕೆ ತಾಲೂಕು ಬಿಸಿಯೂಟದ ಅಧಿಕಾರಿಗೆ ತಿಳಿಸಲಾಗಿತ್ತು. ಆದರೆ ಇದುವರೆಗೆ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಶಾಲೆಯ ಸುತ್ತ ಜಮಾಯಿಸಿದ ವಿದ್ಯಾರ್ಥಿಗಳ ಪೋಷಕರು, ಇದಕ್ಕೆ ಕಾರಣರಾದವರನ್ನು ಕೂಡಲೇ ತರಾಟೆಗೆ ತೆಗೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ