ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡಬಾರದು: ಸಿದ್ದು (Ishwarappa | BJP | Yeddyurappa | Siddaramaiah | Congress)
Bookmark and Share Feedback Print
 
'ಈಶ್ವರಪ್ಪನವರೇ, ನಾಲಿಗೆ ಮೇಲೆ ಹಿಡಿತವಿರಲಿ. ಬಾಯಿಗೆ ಬಂದಂತೆ ಮಾತನಾಡಬೇಡಿ. ಇದು ಸಭ್ಯರ ಲಕ್ಷಣವಲ್ಲ' ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತಾಶೆ ಭಾವನೆಯಿಂದ ರಾಜ್ಯಪಾಲರ ವಿರುದ್ಧ ಈಶ್ವರಪ್ಪನವರು ಆರೋಪ ಮಾಡುತ್ತಿದ್ದಾರೆ. ಸಂವಿಧಾನದ ಪ್ರಕಾರ ಮಾತನಾಡುವ ಅಧಿಕಾರ ರಾಜ್ಯಪಾಲರಿಗಿದೆ. ಈ ವಿಷಯವನ್ನು ಈಶ್ವರಪ್ಪನವರು ಮೊದಲು ಮನದಟ್ಟುಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ವಿಧಾನಪರಿಷತ್‌ಗೆ ವಿ.ಸೋಮಣ್ಣ ಅವರ ಹೆಸರನ್ನು ಸಂವಿಧಾನ ಬದ್ಧವಾಗಿಯೇ ಕೈಬಿಟ್ಟಿದ್ದಾರೆ. ಈ ರೀತಿಯ ಅನೇಕ ಸಂದರ್ಭಗಳು ಬಂದು ಹೋಗಿವೆ. ಇದರ ಬಗ್ಗೆ ಈಶ್ವರಪ್ಪನವರಿಗೆ ಸಾಮಾನ್ಯ ಜ್ಞಾನವೂ ಇಲ್ಲದಂತೆ ಕಾಣುತ್ತದೆ ಎಂದ ಅವರು, ರಾಜ್ಯಪಾಲರ ವಿರುದ್ಧದ ಈಶ್ವರಪ್ಪನವರ ಹೇಳಿಕೆಯನ್ನು ಖಂಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ