ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪುತ್ತೂರು: ಸದಾನಂದ ಗೌಡರ ಮನೆಗೆ ನುಗ್ಗಿದ ಕಳ್ಳರು! (Sadanada gowda | Puttur | BJP | Mangalore)
Bookmark and Share Feedback Print
 
ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರ ಪಡೀಲ್‌ನಲ್ಲಿರುವ ನಿವಾಸಕ್ಕೆ ಕಳೆದ ರಾತ್ರಿ ಕಳ್ಳರು ನುಗ್ಗಿದ್ದು, ಲಕ್ಷಾಂತರ ರೂ.ನಗದು ಹಾಗೂ ಚಿನ್ನಾಭರಣ ಅಪಹರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸದಾನಂದಗೌಡರ ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು 2ಬೆಡ್ ರೂಂಗಳನ್ನು ಜಾಲಾಡಿದ್ದಾರೆ. ಮನೆಯಲ್ಲಿನ ಬಟ್ಟೆಗಳನ್ನು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ ಎಸೆಯಲಾಗಿದೆ. ಮನೆಯಲ್ಲಿ ಸಿಕ್ಕ 2 ಸೂಟ್‌ಕೇಸ್‌ಗಳನ್ನು ತೆರೆಯಲಾಗದೆ ನಿವಾಸದಿಂದ 100 ಮೀ. ದೂರದವರೆಗೆ ಹೊತ್ತೊಯ್ದು ಆನಂತರ ಒಡೆದುಹಾಕಿ ಹಣ ಹಾಗೂ ಚಿನ್ನ ದೋಚಿದ್ದಾರೆ.

ಸದಾನಂದ ಗೌಡರ ಅವರ ಮನೆಗೆ ಹಗಲು ಮತ್ತು ರಾತ್ರಿ ಪೊಲೀಸ್ ಕಾವಲಿದ್ದು, ಕಳೆದ ರಾತ್ರಿ ಘಟನೆ ಸಂದರ್ಭ ಓರ್ವ ಪೊಲೀಸ್ ಸಿಬ್ಬಂದಿ ಕಾವಲಿದ್ದು, ಪೊಲೀಸ್ ಕಾವಲಿನ ನಡುವೆಯೂ ಮನೆ ದರೊಡೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಇದೀಗ ಪೊಲೀಸ್ ಅಧಿಕಾರಿಗಳು ತನಿಖೆಯಲ್ಲಿ ನಿರತರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ