'ಗೆಟ್ ಔಟ್ ಫ್ರಂ ಹಿಯರ್...ನಿಮ್ಮನ್ನು ಒದ್ದು ಒಳಹಾಕ್ತೀನಿ...ಬೋ...ಮಗನೇ...ಹೋಗೋ...ಬಾಸ್ಟರ್ಡ್...ಹೋಗಿ...ಹೋಗಿ ಇಲ್ಲಿಂದ' ಹೀಗೆ ತಾಳ್ಮೆಕಳೆದುಕೊಂಡ ಎಸಿಪಿ ಎಚ್.ಟಿ. ರಮೇಶ್ ಅವಾಚ್ಯ ಶಬ್ದಗಳನ್ನು ಉಪಯೋಗಿಸಿದ್ದು ಸುದ್ದಿ ಮಾಡಲು ಹೋದ ಪತ್ರಕರ್ತರಿಗೆ.
ಸೋಮವಾರ ನಗರಕ್ಕೆ ಆಗಮಿಸಿದ್ದ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಐಐಪಿಎಂನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ವರದಿಗಾಗಿ ತೆರಳಿದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಿದ ಎಸಿಪಿ ರಮೇಶ್, ಪತ್ರಕರ್ತರನ್ನೇ ತಳ್ಳಾಡಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದ ಘಟನೆ ನಡೆಯಿತು.
ಯಾವುದೇ ಬಿಗು ವಾತಾವರಣ ಇಲ್ಲದಿದ್ದಾಗಲು ಕೂಡ ಪತ್ರಕರ್ತರು ಕಾರ್ಯಕ್ರಮದ ವರದಿ ಮಾಡಲು ಗೇಟ್ ಅನ್ನು ಪ್ರವೇಶಿಸುವ ಮೂದಲೇ ಅವರನ್ನು ಏಕಾಏಕಿ ತಡೆದು ದರ್ಪ ತೋರ್ಪಡಿಸಿದ್ದರು. ಇದರಿಂದ ಅಸಮಾಧಾನಗೊಂಡ ಪತ್ರಕರ್ತರು ಸ್ಥಳದಲ್ಲಿಯೇ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಅನಾವಶ್ಯಕವಾಗಿ ಪತ್ರಕರ್ತರ ಮೇಲೆಯೇ ದರ್ಪ ತೋರಿಸಿ, ಅವಾಚ್ಯ ಶಬ್ದಗಳನ್ನು ಉಪಯೋಗಿಸುವ ಎಸಿಪಿ ರಮೇಶ್, ಜನಸಾಮಾನ್ಯರ ಜೊತೆ ಯಾವ ರೀತಿಯಲ್ಲಿ ನಡೆದುಕೊಳ್ಳಬಹುದು ಎಂದು ಎನ್ಡಿಟಿವಿಯ ಕ್ಯಾಮರಮೆನ್ ಕಿರಣ್ ಮಾಧ್ಯಮಗಳ ಜೊತೆ ಮಾತನಾಡುತ್ತ ದೂರಿದ್ದಾರೆ.