ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಚೆಡ್ಡಿ ಬಿಚ್ಚಿಸಿದ್ರೆ ಹೋರಾಟಕ್ಕೆ ಬೆಲೆ: ಕಾಗೋಡು (Yeddyurappa | BJP | Kagodu | Congress | JDS)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಚಡ್ಡಿ ಬಿಚ್ಚಿಸಿದರೆ ಮಾತ್ರ ಹೋರಾಟಕ್ಕೆ ಬೆಲೆ ಸಿಗುವುದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಟೀಕಾಪ್ರಹಾರ ನಡೆಸಿದ್ದಾರೆ.

ಹಿಂದುಳಿದ ವರ್ಗಗಳ ಜಾತಿವಾರು ಸಮೀಕ್ಷೆ ಮಾಡುವುದೂ ಸೇರಿದಂತೆ ಕೆನೆಪದರದ ಆದಾಯ ಮಿತಿ ಹೆಚ್ಚಳ ಮಾಡುವಂತೆ ಮನವಿ ಮಾಡಿದರು ಕೂಡ ಯಡಿಯೂರಪ್ಪ ಈ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೋರಾಟಕ್ಕೆ ಜಯ ದೊರೆಯಬೇಕಾದರೆ ಚೆಡ್ಡಿ ಬಿಚ್ಚಿಸಬೇಕು ಎಂದು ಕಿಡಿಕಾರಿದರು.

ನಗರದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಸಮೀಪ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳ್ಳಿಯ ಕಡೆ ಮಾತನಾಡುವುದೇ ಚೆಡ್ಡಿ ಯಡ್ಡಿ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರದಲ್ಲಿರುವ ಯಾವೊಬ್ಬ ಮಂತ್ರಿ, ಮುಖಂಡರುಗಲು ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಮಾತನಾಡುತ್ತಿಲ್ಲ. ಜೊತೆಗೆ, ಜಾತಿವಾರು ಸಮೀಕ್ಷೆ ಮಾಡಿ ಎಂದು ಆಗ್ರಹಿಸುತ್ತಿಲ್ಲ. ಎಲ್ಲಿ ಹೇಳಿದರೆ ತಮ್ಮ ಕುರ್ಚಿ ಹೋಗುತ್ತದೋ ಎಂದು ಹೆದರಿ ಮೌನಕ್ಕೆ ಶರಣಾಗಿದ್ದಾರೆ ಎಂದು ಲೇವಡಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ