ಕಳೆದ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಪ್ರಯುಕ್ತ ರಾಜ್ಯದ 3ಸಾವಿರ ಶಿವ ದೇವಾಲಯಗಳಲಿಗೆ ಸುಮಾರು 30ಸಾವಿರ ಲೀಟರ್ ಗಂಗಾಜಲ ವಿತರಿಸಲಾಗಿದೆ.
ಎರಡು ದಿನಗಳ ಹಿಂದೆಯೇ ಹರಿದ್ವಾರದಿಂದ 30ಸಾವಿರ ಲೀಟರ್ ಗಂಗಾಜಲ ಬೆಂಗಳೂರಿನ ಚಾಮರಾಜಪೇಟೆಯ ರಾಮೇಶ್ವರ ದೇವಾಲಯಕ್ಕೆ ತರಿಸಲಾಗಿತ್ತು. ಗಂಗಾಜಲವನ್ನು ವಿವಿಧ ದೇವಾಲಯಗಳಿಗೆ ಸಾಗಿಸಲು 25ಕ್ಕೂ ಹೆಚ್ಚು ಟೆಂಪೂ ಟ್ರಾವಲರ್ಗಳನ್ನು ಬಳಸಲಾಗಿದೆ ಎಂದು ಮುಜರಾಯಿ ಮಂಡಳಿ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ಶಿವರಾತ್ರಿಯಂದು ದೇವಾಲಯಗಳಲ್ಲಿ ಗಂಗಾಜಲವನ್ನು ವಿತರಿಸುವ ಕಾರ್ಯಕ್ಕೆ ಕೃಷ್ಣಯ್ಯ ಶೆಟ್ಟಿ ಚಾಲನೆ ನೀಡಿದ್ದರು. ಈ ಕಾರ್ಯಕ್ರಮವನ್ನು ಪ್ರತಿವರ್ಷವೂ ಮುಂದುವರಿಸಲಾಗುವುದು ಎಂದು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಸ್ವಂತ ಖರ್ಚಿನಲ್ಲಿ ದೇವಾಲಯಗಳಲ್ಲಿ ಗಂಗಾಜಲ ವಿತರಿಸುವ ಕಾರ್ಯವನ್ನು ಮುಂದುವರಿಸಿರುವುದಾಗಿ ವಿವರಿಸಿದ್ದಾರೆ.