ಮುತಾಲಿಕ್ಗೆ ಹೆಣ್ಣು ಹುಡುಕಿ ಕೊಡುವ ಕೆಲಸ ಪಕ್ಷದ್ದು : ವಾಟಾಳ್
ಬೆಂಗಳೂರು, ಭಾನುವಾರ, 14 ಫೆಬ್ರವರಿ 2010( 16:08 IST )
ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುವ ಶ್ರೀರಾಮ ಸೇನಾ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಮೊದಲು ಮದುವೆಯಾಗಲಿ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆ ಆದವರಿಗೆ ಮಾತ್ರವೇ ಪ್ರೇಮದ ಅರ್ಥ ತಿಳಿಯುವುದು. ಅದಕ್ಕಾಗಿ ಮದುವೆಯಾಗಲು ಮುತಾಲಿಕ್ ಅವರಿಗೆ ಸೂಕ್ತ ಹೆಣ್ಣು ಹುಡುಕಿಕೊಡುವ ಕೆಲಸವನ್ನು ಪಕ್ಷ ನೋಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಎಲ್ಲೆಂದರಲ್ಲಿ ತಾಳಿ ಕಟ್ಟಿಸುವುದು ಸಾಧ್ಯವಲ್ಲ. ಕ್ರೈಸ್ತರು ಮತ್ತು ಮುಸ್ಲಿಮರಿಗೆ ಹೇಗೆ ತಾಳಿ ಕಟ್ಟುವಿರಿ ಎಂದು ಪ್ರಶ್ನೆ ಮಾಡಿದ ಅವರು, ತಾಳಿಯ ಬಂಧನ ಪವಿತ್ರವಾದದ್ದು, ಅದನ್ನು ಬೀದಿಗೆ ತರುವುದು ತರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರೇಮ ಎಂಬುದು ಮನುಷ್ಯರ ಸ್ವತ್ತಲ್ಲ. ಜಗತ್ತಿನ ಎಲ್ಲಾ ಪ್ರಾಣಿಗಳಿಗೂ ಸಂಬಂಧಿಸಿದ್ದು, ಆದರೆ ಕೆಲವರು ಪ್ರೇಮಕ್ಕೆ ಕೆಟ್ಟ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.