ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೊಲ್ಲರಹಟ್ಟಿ-ಕೃಷ್ಣ ಕುಟೀರ ನಿರ್ಮಾಣಕ್ಕೆ 10 ಕೋಟಿ: ಸುಧಾಕರ್ (BJP | Sudhakar | Congress | Yadav | Krishna kutira | Budget 2010)
Bookmark and Share Feedback Print
 
ರಾಜ್ಯದ ಗೊಲ್ಲರಹಟ್ಟಿಗಳಲ್ಲಿ ಕೃಷ್ಣ ಕುಟೀರ ನಿರ್ಮಿಸಲು ಮುಂದಿನ ಬಜೆಟ್‌ನಲ್ಲಿ 10 ಕೋಟಿ ರೂ. ಮೀಸಲಿಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್ ತಿಳಿಸಿದರು.

ನಗರದ ಗುರುಭವನದಲ್ಲಿ ಯಾದವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರ ಪರಿಸ್ಥಿತಿ ಸುಧಾರಣೆಗೆ ಕೃಷ್ಣ ಕುಟೀರ ನಿರ್ಮಾಣಕ್ಕೆ 2010-11ರ ಬಜೆಟ್‌ನಲ್ಲಿ 5 ಕೋಟಿ ರೂ. ನೀಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇದನ್ನು ಹತ್ತು ಕೋಟಿಗೆ ಹೆಚ್ಚಿಸಲಾಗುವುದು ಎಂದರು.

ಪರಿಶಿಷ್ಟ ಸಮುದಾಯದವರಕ್ಕಿಂತಲೂ ನಿಕೃಷ್ಟವಾಗಿ ಗೊಲ್ಲರಹಟ್ಟಿಗಳ ಜನ ವಾಸಿಸುತ್ತಿದ್ದಾರೆ. ಗೊಲ್ಲರ ಸಮಾಜದ ಅಭಿವೃದ್ದಿಗಾಗಿ ಜಿಲ್ಲೆಯ ಎಲ್ಲ ಗೊಲ್ಲರಹಟ್ಟಿಗಳಲ್ಲಿ 1,500 ಮನೆ ನಿರ್ಮಿಸಿ ಕೊಡಲಾಗುವುದು. ಜತೆಗೆ ಯಾದವ ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಯಾವುದೇ ಒಂದು ಸಮಾಜ ಆರ್ಥಿಕವಾಗಿ ಸಬಲವಾಗಬೇಕಾದರೆ ಶೈಕ್ಷಣಿಕ ಬೆಳವಣಿಗೆ ಅಗತ್ಯ. ಯಾದವ ಸಮಾಜದಲ್ಲಿ ಶೈಕ್ಷಣಿಕ ಕೊರತೆ ಎದ್ದು ಕಾಣುತ್ತಿದೆ. ಇದನ್ನು ನಿವಾರಿಸಿಕೊಂಡು ಬುದ್ದಿವಂತರಾಗಬೇಕು ಎಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ