ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶ್ರೀರಾಮುಲು ಮಠ ಸೇರಿಕೊಳ್ಳಲಿ: ಖಮರುಲ್ ಇಸ್ಲಾಂ (Sri ramulu | BJP | Congress | KPCC | Khmarulla islam)
Bookmark and Share Feedback Print
 
ಆರೋಗ್ಯ ಸಚಿವ ಶ್ರೀರಾಮುಲು ಯಾವ ಪುರುಷಾರ್ಥಕ್ಕೆ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಅವರು ಹೀಗೆಲ್ಲ ಮಾಡುವುದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇವಾಲಯವೋ, ಇಲ್ಲ ಮಠವನ್ನೋ ಸೇರಲಿ ಎಂದು ಗುಲ್ಬರ್ಗ ಉತ್ತರ ಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಎಲ್ಲ ಕಡೆ ವಾಂತಿಭೇದಿ ಇತ್ಯಾದಿ ರೋಗಗಳು ಕಾಣಿಸಿಕೊಂಡಿವೆ. ಆರೋಗ್ಯ ಇಲಾಖೆಗೆ ರೋಗ ಬಡಿದುಕೊಂಡಿದೆ. ಈ ಸಂದರ್ಭದಲ್ಲಿ ತಮ್ಮ ಇಲಾಖೆಯನ್ನು ಚುರುಕುಗೊಳಿಸಬೇಕಾಗಿರುವ ಶ್ರೀರಾಮುಲು ತಲೆ ಬೋಳಿಸಿಕೊಂಡು ಕಾಲಲ್ಲಿ ಪಾದರಕ್ಷೆಗಳಿಲ್ಲದೇ ಪಾದಯಾತ್ರೆ ಕೈಕೊಳ್ಳುವ ಮೂಲಕ ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಪಾದಯಾತ್ರೆಯನ್ನು ಟೀಕಿಸುವ ನೈತಿಕ ಹಕ್ಕು ಶ್ರೀರಾಮುಲು ಅವರಿಗಿಲ್ಲ, ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ ಮತ್ತು ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ನಮ್ಮ ಪಾದಯಾತ್ರೆ ನಡೆದಿದೆ. ಇದು ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ವಿರುದ್ಧ ಅಲ್ಲ ಎನ್ನುವುದನ್ನು ಅವರು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.

ಒಬ್ಬ ಸಚಿವರಾಗಿ ಗಂಭೀರವಾಗಿರಬೇಕಾದ ಶ್ರೀರಾಮುಲು ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಾರೆ. ಇಂಥವರು ಸಚಿವ ಸಂಪುಟದಲ್ಲಿರಬಾರದು, ಆದ್ದರಿಂದ ಇವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರ ಬರಲಿ ಎಂದು ಸವಾಲು ಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ