ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರತಿಭಟನೆ: ಕೊಚ್ಚೆಯಲ್ಲಿ ರೆಡ್ಡಿ ಬ್ರದರ್ಸ್ ಚಿತಾಭಸ್ಮ ವಿಸರ್ಜನೆ! (Bangalore | Janardana Reddy | Congress | BJP | Yeddyuappa)
Bookmark and Share Feedback Print
 
ಕಾಂಗ್ರೆಸ್ ಮುಖಂಡರ ಭೇಟಿಯಿಂದ ಬಳ್ಳಾರಿಗೆ ವಕ್ರದೃಷ್ಟಿ ಬಿದ್ದಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ದೃಷ್ಟಿ ನಿವಾರಣ ಹೋಮ ನಡೆದರೆ. ಮತ್ತೊಂದೆಡೆ ಉದ್ಯಾನನಗರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಳ್ಳಾರಿ ಸಚಿವ ತ್ರಯರ ಚಿತಾಭಸ್ಮವನ್ನು ವಿಸರ್ಜಿಸಿ ವಿನೂತನ ರೀತಿಯ ಪ್ರತಿಭಟನೆ ಗುರುವಾರ ನಡೆಸಿದರು.

ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ರೆಡ್ಡಿ ಸಹೋದರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು ಇಂದು ಬಿಎಚ್‌ಎಲ್ ಸರ್ಕಲ್ ಸಮೀಪ ರೆಡ್ಡಿ ಸಚಿವತ್ರಯರ ಚಿತಾಭಸ್ಮವನ್ನು ಕೊಳಚೆ ನೀರಿನಲ್ಲಿ ವಿಸರ್ಜನೆ ಮಾಡಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಸಚಿವರಿಗೆ ಧಿಕ್ಕಾರ, ಬಳ್ಳಾರಿ ಗಣಿ ಭೂತಗಳಿಗೆ ಧಿಕ್ಕಾರ, ಜನಾರ್ದನ ರೆಡ್ಡಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ, ರೆಡ್ಡಿ ಸಹೋದರರ ಭಿತ್ತಿಚಿತ್ರವನ್ನು ಪ್ರದರ್ಶಿಸಿದರು. ತಾವೇ ಅಕ್ರಮ ನಡೆಸಿ ಕಾಂಗ್ರೆಸ್ ವಿರುದ್ಧ ರೆಡ್ಡಿ ಸಹೋದರರು ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಗಣಿ ಕಳ್ಳರಿಂದ ಕಾಂಗ್ರೆಸ್ ಮುಖಂಡರು ಯಾವುದೇ ಪಾಠ ಕಲಿಯಬೇಕಾಗಿಲ್ಲ. ಹಾಗಾಗಿ ಬಳ್ಳಾರಿ ಸಚಿವರ ಚಿತಾಭಸ್ಮವನ್ನು ವಿಸರ್ಜಿಸುವ ಮೂಲಕ ಪ್ರತಿಭಟನೆ ನಡೆಸಿರುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ