ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಿರುಕುಳ: ಸಿದ್ದಯೋಗಾನಂದ ಸ್ವಾಮೀಜಿ ನೇಣಿಗೆ ಶರಣು (Siddayogananda swamiji | Bangalore | Dabus pete | police)
Bookmark and Share Feedback Print
 
ಹಿರಿಯ ಸ್ವಾಮೀಜಿಗಳ ಕಿರುಕುಳ ತಾಳಲಾರದೆ ಡಾಬಸ್‌ಪೇಟೆ ಸಮೀಪದ ಹೊನಕಲ್ಲು ಮಲ್ಲೇಶ್ವರ ಮಠದ ಸಿದ್ದಯೋಗಾನಂದ ಸ್ವಾಮೀಜಿ (40) ಬುಧವಾರ ರಾತ್ರಿ ನೇಣಿಗೆ ಶರಣಾದ ಘಟನೆ ನಡೆದಿದೆ.

ಸ್ವಾಮೀಜಿ ಕಚೇರಿಯಲ್ಲಿ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಸಾಯುವ ಮುನ್ನ ಬರೆದಿದ್ದ ಮರಣಪತ್ರ ಪೊಲೀಸರಿಗೆ ದೊರೆತಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಮಠದ ಹಿರಿಯ ಸ್ವಾಮೀಜಿಗಳೇ ಕಾರಣ ಎಂದು ಮರಣ ಪತ್ರದಲ್ಲಿ ಸ್ವಾಮೀಜಿ ಬರೆದಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದವರಾದ ಸಿದ್ದಯೋಗಾನಂದ ಸ್ವಾಮೀಜಿ ಕಳೆದ ಹದಿನೈದು ವರ್ಷದಿಂದ ಮಠದ ಸ್ವಾಮೀಜಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಎರಡು ದಿನಗಳ ಹಿಂದೆ ಈ ಮಠಕ್ಕೆ ಹೊಸಪೇಟೆಯ ಮುನಿರಾಬಾದ್‌ನಲ್ಲಿರುವ ಮಧುಮಯವಾದ ಸ್ವಾಮೀಜಿ ಕೆಲ ಮಹಿಳೆಯರನ್ನು ಕರೆ ತಂದಿದ್ದರು. ಇದಕ್ಕೆ ಸಿದ್ದಯೋಗಾನಂದ ಸ್ವಾಮೀಜಿ ಅವರು ಆಕ್ಷೇಪ ಪಡಿಸಿದ್ದರು. ಈ ವಿಷಯಕ್ಕಾಗಿಯೇ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದು ಮಠದ ಭಕ್ತರು ಆರೋಪಿಸಿದ್ದಾರೆ.

ಆ ನಿಟ್ಟಿನಲ್ಲಿ ಮಧುಮಯ ಸ್ವಾಮೀಜಿಯೇ ಸಿದ್ದಯೋಗಾನಂದ ಅವರನ್ನು ಹತ್ಯೆಗೈದಿರಬೇಕೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಡಾಬಸ್‌ಪೇಟೆಯ ಪಿಎಸ್ಐ ಹಾಗೂ ವೃತ್ತ ನಿರೀಕ್ಷಕ ಯತೀರಾಜ್ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ