ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ನೆಚ್ಚಿನ ಸಚಿವ ನಾನು: ಅಸ್ನೋಟಿಕರ್ (Yeddyurappa | BJP | Lokayuktha | CBI | Illigal Mining)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅತ್ಯಂತ ಅಚ್ಚುಮೆಚ್ಚಿನ ಸಚಿವನಾಗಿದ್ದು, ಮತ್ತಷ್ಟು ಹೆಚ್ಚಿನ ಜವಾಬ್ದಾರಿ ಒಪ್ಪಿಸುವ ನಿರೀಕ್ಷೆಯಲ್ಲಿರುವೆ ಎಂದು ಆನಂದ್ ಅಸ್ನೋಟಿಕರ್ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ರಾಜೀನಾಮೆ ನೀಡಲು ಸಿಎಂ ಸೂಚಿಸಿದ್ದಾರೆ ಎನ್ನುವುದು ಅಪ್ಪಟ ವದಂತಿ. ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಣೆಯಲ್ಲಿ ನನ್ನ ಸಂಸ್ಥೆ ಕೈವಾಡವಿದೆ ಎಂಬ ಆರೋಪ ಆಧಾರರಹಿತ. ಸಿಎಂಗೆ ಈ ವಿಷಯ ಪೂರ್ಣ ಮನವರಿಕೆಯಾಗಿದ್ದು, ರಾಜೀನಾಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಲೋಕಾಯುಕ್ತರಿಗೆ ದೂರು ಕೊಟ್ಟವರ ಬಗ್ಗೆ ಏನೂ ಹೇಳುವುದಿಲ್ಲ. ತನಿಖೆ ನಡೆಸುತ್ತಿರುವ ಲೋಕಾಯುಕ್ತರು ನಿಜಾಂಶ ಪತ್ತೆ ಹಚ್ಚಲಿದ್ದು, ಅದಿರು ಅಕ್ರಮ ಸಾಗಣೆ ನನ್ನ ಸಂಸ್ಥೆ ಅಥವಾ ನನ್ನ ನೇರ ಅಥವಾ ಪರೋಕ್ಷ ಕೈವಾಡವಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ, ಮೀನುಗಾರಿಕೆ ಖಾತೆ ಜತೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದು, ಮುಖ್ಯಮಂತ್ರಿ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.

ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ನಂತರ ನನ್ನ ಕಾರ್ಯವೈಖರಿ ಮುಖ್ಯಮಂತ್ರಿಗೆ ತೃಪ್ತಿ ತಂದಿದ್ದು, ತುಸು ಹೆಚ್ಚಿನ ಪ್ರೀತಿ ತೋರಿಸುತ್ತಿದ್ದಾರೆ. ಈ ಕಾರಣಕ್ಕೆ ಹೆಚ್ಚಿನ ಜವಾಬ್ದಾರಿ ಹೊರಿಸುವ ಸುಳಿವು ಪಡೆದಿರುವೆ ಎಂದು ಆನಂದ ಅಸ್ನೋಟಿಕರ್ ಪುನರುಚ್ಚರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ