ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜೀನಾಮೆ ಉದ್ದೇಶ ಪೂರ್ವಕ ವದಂತಿ: ಶಿವನ ಗೌಡ (Shivana gowda | BJP | Resign | Congress | Yeddyurappa)
Bookmark and Share Feedback Print
 
ತಾವು ರಾಜೀನಾಮೆ ನೀಡಿರುವ ವಿಷಯ ಒಂದು ವದಂತಿಯಾಗಿದ್ದು, ಜನರು ಇದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಗ್ರಂಥಾಲಯ ಸಚಿವ ಕೆ.ಶಿವನಗೌಡ ನಾಯಕ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ವದಂತಿ ಕುರಿತು ಮಾತನಾಡಿದ ಸಚಿವರು, ಉದ್ದೇಶ ಪೂರ್ವಕವಾಗಿ ಹುಟ್ಟಿಸಿರುವ ವದಂತಿಯಾಗಿದೆ. ಇದರಿಂದ ನನಗೂ ಬೇಜಾರಾಗಿದೆ. ಆದರೆ ರಾಜಕಾರಣದಲ್ಲಿ ಇವೆಲ್ಲ ಸಾಮಾನ್ಯ ಎಂದರು.

ಸರಕಾರದ ಭದ್ರತೆಗೆ ಕೈಗೊಂಡ ದಿಟ್ಟ ನಿರ್ಧಾರ ರಾಜ್ಯದ ಜನತೆಗೆ ಗೊತ್ತಿದೆ. ಇಲಾಖೆಯಲ್ಲಿನ ಅವ್ಯವಹಾರ ತನಿಖೆ ನಡೆಸಲಾಗುತ್ತಿದೆ. ಪಕ್ಷ ಮತ್ತು ಸಂಪುಟಕ್ಕೆ ಬದ್ಧನಾಗಿರುವೆ. ಕೈಬಿಡಲು ಗುರುತರ ಆರೋಪಗಳು, ಕಾರಣಗಳು ಇಲ್ಲ. ರಾಜ್ಯ ರಾಜಕಾರಣದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳುವ ಚಟುವಟಿಕೆಗಳು ಚರ್ಚೆಯಲ್ಲಿವೆ ಹೊರತು ಯಾರನ್ನೂ ಕೈಬಿಡುವ ಕುರಿತು ಚರ್ಚೆಯೇ ನಡೆದಿಲ್ಲ ಎಂದು ಹಿರಿಯ ಮುಖಂಡರೇ ಹೇಳುತ್ತಿದ್ದಾರೆ ಎಂದು ನುಡಿದರು.

ಸಚಿವರ ರಾಜೀನಾಮೆ ವದಂತಿ ಕ್ಷೇತ್ರದಲ್ಲಿ ನಾನಾ ಚರ್ಚೆಗೆ ಕಾರಣವಾಯಿತು. ಮುಖ್ಯಮಂತ್ರಿ ಯಡಿಯೂರಪ್ಪರ ಜಿಲ್ಲಾ ಪ್ರವಾಸ ಕಾರ್ಯಕ್ರಮದಲ್ಲಿ ಸಚಿವ ಕೆ.ಶಿವನಗೌಡ ನಾಯಕ ಗೈರುಹಾಜರಿ ಹಾಗೂ ಸದ್ಯಕ್ಕೆ ಅವರ ಮೊಬೈಲ್ ಸ್ವಿಚ್ ಆಫ್ ವದಂತಿಗೆ ಪುಷ್ಟಿ ನೀಡಿತು. ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಆತಂಕ ತಂದರೆ ಪ್ರತಿಪಕ್ಷಗಳಿಗೆ ಸಂತಸ ಮೂಡಿಸಿತ್ತು. ಎಲ್ಲೆಡೆ ಜನರ ಗುಂಪು ಚರ್ಚೆ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ