ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ವೈಫಲ್ಯ ನಮಗೆ ಸಹಕಾರಿ: ಕೃಷ್ಣ ಭೈರೇಗೌಡ (BJP | Krishna bairaygowda | Congress | By election | JDS)
Bookmark and Share Feedback Print
 
ಬಿಜೆಪಿ ಸರಕಾರದ ವೈಫಲ್ಯ ಕಡೂರು ಮತ್ತು ಗುಲ್ಬರ್ಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ ಹೇಳಿದರು.

ಇಲ್ಲಿ ಕೈಗೊಂಡಿದ್ದ ಪಾದಯಾತ್ರೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಡೂರು ಅಭ್ಯರ್ಥಿ ಕೆಂಪರಾಜು ಗೆಲುವಿಗೆ ಕೆಎಂಕೆ ಸಾಧನೆ ನೆರವಾಗಲಿದೆ. ಒಡೆದಾಳುವ ಬುದ್ದಿಯ ಬಿಜೆಪಿಗೆ ಮರು ಚುನಾವಣೆ ತಕ್ಕಪಾಠ ಕಲಿಸಲಿದೆ ಎಂದರು.

ಅದಿರು ರಫ್ತು ನಿಷೇಧ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರವಿದೆ. ವಿಪರ್ಯಾಸವೆಂದರೆ ಇದೇ ರಾಜ್ಯ ಸರಕಾರ ಕೆಲ ತಿಂಗಳ ಹಿಂದೆ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಅದಿರು ರಫ್ತು ನಿಷೇಧ ಅಕಾರ ರಾಜ್ಯ ಸರಕಾರಕ್ಕಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದೆ ಎಂದರು.

ಪಡಿತರ ಚೀಟಿ, ವಿದ್ಯುತ್, ಸೇರಿದಂತೆ ಹಲವು ಮೂಲ ಸೌಕರ್ಯ ಕಲ್ಪಿಸಿಕೊಡುವಲ್ಲಿ ರಾಜ್ಯಸರಕಾರ ವಿಫವಾಗಿದೆ. ರೈತರ ಮೇಲೆ ಗೋಲಿಬಾರ್, ಲಾಠಿಚಾರ್ಜ್ ಪ್ರಕರಣಗಳು ಸರಕಾರಕ್ಕೆ ಕಪ್ಪುಚುಕ್ಕೆಯಾಗಿವೆ. ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ನಡೆಸಿದ ಜನ ಜಾಗೃತಿ ಪಾದಯಾತ್ರೆಗೆ ರಾಜ್ಯದ ಜನರಿಂದ ಅಭೂತ ಪೂರ್ವ ಬೆಂಬಲ ದೊರೆಯಿತು. ಸದ್ಯ ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿರುವುದರಿಂದ ಹೆಚ್ಚು ಹೇಳಲು ಬಯಸುವುದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ