ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ: ಅಧಿಕಾರಿ ಅಮಾನತು! (Suresh kumar | Thumakur | Zilla panchayath | CEO)
Bookmark and Share Feedback Print
 
ಸಚಿವರ ಮುಂಭಾಗದಲ್ಲೇ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುತ್ತಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಲ್ಲದೆ, ಸಾರ್ವಜನಿಕವಾಗಿಯೇ 'ಮಂಗಳಾರತಿ' ಮಾಡಿಸಿಕೊಂಡ ಅಧಿಕಾರಿ ಅಮಾನತು ಶಿಕ್ಷೆಗೆ ಗುರಿಯಾದ ಘಟನೆ ಮಂಗಳವಾರ ಜಿಲ್ಲಾ ಪಂಚಾಯ್ತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆದಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಅವರು ತುಮಕೂರಿನಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಗುಬ್ಬಿ ತಾಲೂಕು ಪಂಚಾಯತ್ ರಸಿಕ ಸಿಇಓ ಮಹಾಲಿಂಗಪ್ಪ ಎಂಬವರು ಮೊಬೈಲ್‌ನಲ್ಲೇ ತಲ್ಲೀನರಾಗಿದ್ದರು. ಆ ದೃಶ್ಯ ಮಾಧ್ಯಮಕ್ಕೆ ಸೆರೆ ಸಿಕ್ಕಿತ್ತು. ನಂತರ ಮಾಧ್ಯಮ ಪ್ರತಿನಿಧಿಗಳು ವಿಷಯವನ್ನು ಸಚಿವರ ಗಮನಕ್ಕೆ ತಂದಾಗ ಸಿಇಓ ವಿರುದ್ಧ ಕೆಂಡಾಮಂಡಲರಾಗಿ ತರಾಟೆಗೆ ತೆಗೆದುಕೊಂಡರು.

'ಬನ್ರಿ ಇಲ್ಲಿ, ನಿಮಗೆ ಎಷ್ಟು ವಯಸ್ಸು? ಮಕ್ಕಳೆಷ್ಟು ಎರಡು ಗಂಡು ಮಕ್ಕಳು ಸರ್...ಓಹೋ ಅದಕ್ಕೆ ಹೆಣ್ಣುಗಳ ಅಶ್ಲೀಲ ಚಿತ್ರ ನೋಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಾಗ ಕಕ್ಕಾಬಿಕ್ಕಿಯಾದ ಮಹಾಲಿಂಗಪ್ಪ, ಸಾರಿ ಸರ್...ಏನ್ರಿ ನಿಮ್ಮಿಂದಾಗಿ ಎಲ್ಲಾ ಅಧಿಕಾರಿಗಳ ಮರ್ಯಾದೆ ಹೋಗುತ್ತಲ್ಲಾ. ನಿಮ್ಮಂತವಹರಿಂದಾಗಿಯೇ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಸಾರ್ವಜನಿಕವಾಗಿಯೇ ಮಂಗಳಾರತಿ ಮಾಡಿದರು.

ಸರ್...ಸರ್....ನಾನು ಮಿಸ್ ಕಾಲ್ ನೋಡುತ್ತಿದ್ದೇನೆ ಎಂದು ಸಮಜಾಯಿಷಿ ನೀಡುತ್ತಿದ್ದಂತೆಯೇ ಆಕ್ರೋಶಗೊಂಡಿದ್ದ ಸಚಿವ ಸುರೇಶ್ ಕುಮಾರ್ ಅವರು, ಈ ಕೂಡಲೇ ಸಿಇಓ ಮಹಾಲಿಂಗಪ್ಪ ಅವರನ್ನು ಅಮಾನತು ಮಾಡಿ ಎಂದು ಆದೇಶ ನೀಡಿದರು. ಅಧಿಕಾರಿಯ ಕೈಯಿಂದ ಮೊಬೈಲ್ ಕಸಿದುಕೊಂಡ ಸಚಿವರು ಅದನ್ನು ಪೊಲೀಸರಿಗೆ ಹಸ್ತಾಂತರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅಂತೂ ಮೊಬೈಲ್ ಹುಚ್ಚಿಗೆ ಬಿದ್ದ ಅಧಿಕಾರಿ ಸಚಿವರ ಕೆಂಗಣ್ಣಿಗೆ ಗುರಿಯಾಗಿ ಅಮಾನತು ಶಿಕ್ಷೆ ಅನುಭವಿಸುವಂತಾಗಿದೆ. ಆದರೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಾಲಿಂಗಪ್ಪ ಮಾತ್ರವಲ್ಲ ಇನ್ನುಳಿದ ಅಧಿಕಾರಿಗಳು ಮೊಬೈಲ್‌ ಮಾತುಕತೆಯಲ್ಲೇ ತಲ್ಲೀನರಾಗಿದ್ದರು. ಕೆಲವರು ತೂಕಡಿಸುತ್ತಿದ್ದರು. ಅಂತೂ ಸಚಿವರ ಮಂಗಳಾರತಿ ಉಳಿದ ಅಧಿಕಾರಿಗಳಿಗೊಂದು ಪಾಠವಾದಂತಾಯಿತು!
ಸಂಬಂಧಿತ ಮಾಹಿತಿ ಹುಡುಕಿ