ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗವಾಯಿ ಶೋಕಾಚರಣೆ ಲೆಕ್ಕಿಸದೆ ಕಿಮ್ಸ್‌ನಿಂದ ಪಾರ್ಟಿ ಆಚರಣೆ (pandit puttaraj gawai | Bangalore | Karnataka | State News)
Bookmark and Share Feedback Print
 
ಪಂಡಿತ ಪುಟ್ಟರಾಜ ಗವಾಯಿಗಳ ಶಿವೈಕ್ಯ ಹಿನ್ನೆಲೆಯಲ್ಲಿ ರಾಜ್ಯದ್ಯಾಂತ ಎರಡು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಆದರೆ ಇವೆಲ್ಲವನ್ನು ಲೆಕ್ಕಿಸದೆ ಕಿಮ್ಸ್ ಅಧಿಕಾರಿಗಳು ಪಾರ್ಟಿ ಆಚರಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕೆಎಂಸಿ ಸುವರ್ಣ ಮಹೋತ್ಸವದ ಸಮಾರಂಭದ ಹಿನ್ನೆಲೆಯಲ್ಲಿ ಶನಿವಾರ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಗವಾಯಿ ಶೋಕಾಚರಣೆ ಹಿನ್ನೆಲೆಯಲ್ಲಿ ಆಡಂಬರ ಕಾರ್ಯಕ್ರಮಕ್ಕೆ ಕತ್ತರಿ ಹಾಕಲಾಗಿತ್ತಾದರೂ ಸಂಜೆಯಾಗುತ್ತಿದ್ದಂತೆಯೇ ಅಧಿಕಾರಿಗಳು ಮೋಜು ಮಸ್ತಿನಲ್ಲಿ ತೊಡಗಿರುವುದು ಕಂಡುಬಂದಿತ್ತು.

ಅಲ್ಲದೆ ಪಾರ್ಟಿಗೆ ಸರ್ಕಾರಿ ವಾಹನಗಳ ಬಳಕೆಯಾಗಿರುವುದು ಕೂಡಾ ವಿವಾದಕ್ಕೆಡೆ ಮಾಡಿದೆ. ಮಧ್ಯರಾತ್ರಿಯ ವರೆಗೂ ಮದ್ಯಪಾನದಲ್ಲಿ ತೊಡಗಿದ್ದ ಅಧಿಕಾರಿಗಳು ಕುಣಿದು ಕುಪ್ಪಲಿಸಿರುವುದು ನೂತನ ರಾದ್ಧಾಂತಕ್ಕೆ ಎಡೆ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ