ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೌನಕ್ಕೆ ಶರಣು, ರಘುಪತಿ ಗೀತೆಗೆ ದೇವೇಗೌಡರ ತಾಳ! (Deve gowda | JDS | Mahathma gandhi | Kumaraswamy | BJP)
Bookmark and Share Feedback Print
 
ಸದಾ ಒಂದಲ್ಲ ಒಂದು ವಿಷಯದ ಬಗ್ಗೆ ಟೀಕಿಸುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶನಿವಾರ ರಾಜಕೀಯ ವಿಷಯ ಮಾತನಾಡಲು ನಿರಾಕರಿಸಿ ಅಚ್ಚರಿಹುಟ್ಟಿಸಿದ್ದಲ್ಲದೆ, ರಘುಪತಿ ರಾಘವ ರಾಜಾರಾಮ್ ಸೇರಿದಂತೆ ಇನ್ನಿತರೆ ಗೀತೆಗಳಿಗೆ ತಲೆಯಾಡಿಸಿ ತಾಳ ಹಾಕಿದ ಅಪರೂಪದ ಘಟನೆ ನಡೆಯಿತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಸುಮಾರು ಒಂದು ಗಂಟೆಗೂ ಅಧಿಕ ಸಮಯ ಸರ್ವಧರ್ಮ ಪ್ರಾರ್ಥನಾ ಗೀತೆಗಳಿಗೆ ತಾಳ ಹಾಕಿದ ದೇವೇಗೌಡರು ರಾಜಕೀಯ ಮಾತನಾಡಲು ಒಲ್ಲೆ ಎಂದರು.

ಬೃಹತ್ ಬೆಂಗಳೂರು ನಗರ ಜನತಾದಳ ಶನಿವಾರ ಹಮ್ಮಿಕೊಂಡಿದ್ದ ಮಹಾತ್ಮಗಾಂಧೀಜಿ ಅವರ 141ನೇ ಜನ್ಮದಿನಾಚರಣೆ ಅಂಗವಾಗಿ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಾರ್ಥನೆ, ಗಾಂಧಿ ಗೀತೆಗಳು, ಗೀತವಾಚನ, ಖುರಾನ್ ಹಾಗೂ ಬೈಬಲ್ ಪಠಣ ಆಲಿಸಿದ ದೇವೇಗೌಡರು ಹಾಡಿಗೆ ತಲೆಯಾಡಿಸಿ ತಾಳಹಾಕಿದರು.

ಗೀತಗಾಯನ ಮುಗಿದ ನಂತರ ಯಾವುದೇ ಹೇಳಿಕೆಯನ್ನು ನೀಡಲು ನಿರಾಕರಿಸಿದ ಅವರು ಪವಿತ್ರ ದಿನದಂದು ರಾಜಕೀಯ ವಿಷಯಗಳ ಬಗ್ಗೆ ಮಾತನಾಡುವುದು ಬೇಡ. ನಾಳೆ ಮಾತನಾಡುವುದಾಗಿ ನಗರ ಅಧ್ಯಕ್ಷ ನಾರಾಯಣರಾವ್ ಅವರಿಂದ ಸೂಚನೆ ನೀಡಿಸಿದ್ದರು.

ಅಲ್ಲದೆ, ಕೈ ಸನ್ನೆಯಲ್ಲೇ ಇಂದು ಮಾತನಾಡುವುದಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹಸನ್ಮುಖದಿಂದಲೇ ಸೂಚಿಸಿದರು. ಕಾರ್ಯಕ್ರಮದಲ್ಲಿ ದೇವೇಗೌಡರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ