ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕೀಯ ಶುದ್ದೀಕರಣಕ್ಕೆ ಜನರೇ ಮುಂದಾಗಬೇಕು: ವಿಶ್ವನಾಥ್ (Vishwanath | BJP | Congress | JDS | Yeddyurappa | Mysore)
Bookmark and Share Feedback Print
 
ರಾಜ್ಯದಲ್ಲಿನ ರಾಜಕೀಯ ಶುದ್ದೀಕರಣಕ್ಕೆ ಜನರೇ ಮುಂದಾಗಬೇಕು ಎಂದು ಸಂಸದ ಎಚ್.ವಿಶ್ವನಾಥ್ ಅಭಿಪ್ರಾಯವ್ಯಕ್ತಪಡಿಸಿದ್ದು, ಇತ್ತೀಚೆಗಿನ ರಾಜಕೀಯ ಡೊಂಬರಾಟಕ್ಕೆ ಎಲ್ಲ ಪಕ್ಷಗಳು ಹೊಣೆಯಾಗಿವೆ ಎಂದು ಆರೋಪಿಸಿದರು.

ರಾಜ್ಯ ರಾಜಕೀಯದಲ್ಲಿ ಇದುವರೆಗೂ ಇಲ್ಲದ ಅರಾಜಕತೆ ಕಾಣುತ್ತಿದ್ದೇವೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದ ಜನ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಇಂಥ ವಾತಾವರಣವನ್ನು ರಾಜಕಾರಣಿಗಳೇ ನಿರ್ಮಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿ(ಎಸ್) ಸೇರಿದಂತೆ ಎಲ್ಲಾ ಪಕ್ಷಗಳೂ ಇದಕ್ಕೆ ಕಾರಣ ಎಂದು ನಾಗರಹೊಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಿರುವ ಕುರಿತು ಪ್ರಶ್ನಿಸಿದಾಗ ಪ್ರಾರಂಭದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಂತರ 'ನಿಮ್ಮ ಜೇಬಿನಲ್ಲಿ ಎಷ್ಟು ದುಡ್ಡಿದೆ' ಅನ್ನುತ್ತಾ ಹಣಕ್ಕಾಗಿ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ