ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವೈದ್ಯ ಕಾಲೇಜು ಸಿಬ್ಬಂದಿ ಮರು ನೇಮಕ: ಯಡಿಯೂರಪ್ಪ (BJP | Yeddyurappa | Congress | High court | College)
Bookmark and Share Feedback Print
 
ಹಾಸನ ಮತ್ತು ಮೈಸೂರು ವೈದ್ಯ ಕಾಲೇಜು ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಭಾಗ್ಯಲಕ್ಷ್ಮಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ವೈದ್ಯ ಕಾಲೇಜು ಸಿಬ್ಬಂದಿ ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂದರು.

ವೇದಿಕೆ ಪಕ್ಕದಲ್ಲಿ ನಿಂತಿದ್ದ ವೈದ್ಯ ಕಾಲೇಜಿನ ಕೆಲಸ ವಂಚಿತ ಸಿಬ್ಬಂದಿ, ಮುಖ್ಯಮಂತ್ರಿಗಳ ಭರವಸೆಗೆ ಖುಷಿಯಾಗಿ ಜೈಕಾರ ಘೋಷಣೆ ಮೊಳಗಿಸಿದರು. ವೇದಿಕೆಯಲ್ಲಿ ಸಿಎಂ ಬಹಿರಂಗವಾಗಿಯೇ ನೇಮಕದ ಬಗ್ಗೆ ಭರವಸೆ ನೀಡಿದ್ದಕ್ಕೆ ವೇದಿಕೆಯಲ್ಲಿ ಅವರ ಪಕ್ಕದಲ್ಲಿಯೇ ಕುಳಿತಿದ್ದ ರಾಮಚಂದ್ರಗೌಡರೂ ಸಂತೋಷದಿಂದ ಉಬ್ಬಿ ಹೋಗಿದ್ದರು.

ಸಿಎಂ ಭಾಷಣ ಮುಗಿಸಿ ಕಾರಿನತ್ತ ಹೊರಟಾಗಲೂ ಅವರನ್ನು ಅಡ್ಡಗಟ್ಟಿದ ವೈದ್ಯ ಕಾಲೇಜಿನ ಕೆಲಸ ವಂಚಿತ ಸಿಬ್ಬಂದಿ, ಜೈಕಾರ ಹಾಕಿದರು. ಪ್ರತಿಯಾಗಿ ಮುಖ್ಯಮಂತ್ರಿಗಳು ಸಿಬ್ಬಂದಿಗೆ ಕೈಮುಗಿದು ಮುಂದೆ ಸಾಗಿದರು. ಹಾಸನ ಮತ್ತು ಮೈಸೂರು ವೈದ್ಯ ಕಾಲೇಜು ಸಿಬ್ಬಂದಿ ನೇಮಕದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಎಂ ನೇಮಕ ರದ್ದು ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬಳಿಕ ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು.
ಸಂಬಂಧಿತ ಮಾಹಿತಿ ಹುಡುಕಿ