ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಲ್ಲರನ್ನು ಮಂತ್ರಿ ಮಾಡಲು ಆಗುವುದಿಲ್ಲ: ಯಡಿಯೂರಪ್ಪ (Yadyurappa | Karnataka Politics | Bangalore | State)
Bookmark and Share Feedback Print
 
ಶನಿವಾರ ನಡೆದ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಹಾಗೂ ಸೀರೆ ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಬಸವನಬಾಗೇವಾಡಿ ಕ್ಷೇತ್ರ ಶಾಸಕ ಎಸ್. ಕೆ. ಬೆಳ್ಳುಬ್ಬಿ ಬೆಂಬಲಿಗನೊಬ್ಬ ವಿಜಾಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಿ ಎಂದು ಘೋಷಣೆ ಕೂಗಿದ್ದರ ಹಿನ್ನೆಲೆಯಲ್ಲಿ ತೀವ್ರ ಗರಂ ಆದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರತಿಯೊಬ್ಬರಿಗೂ ಸಚಿವ ಸ್ಥಾನ ನೀಡಲಾಗುವುದಿಲ್ಲ ಎಂದು ಎಚ್ಚರಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಚಿವ ಸ್ಥಾನದ ಆಸೆ ಈ ರಾಜ್ಯವನ್ನೇ ಹಾಳು ಮಾಡಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲಿಕ್ಕಾಗಿ ಯಾರ ಷರತ್ತುಗಳಿಗೆ ಮಣಿಯುದಿಲ್ಲ ಎಂದು ಕಟುವಾಗಿ ನುಡಿದರು.

ವಿಜಾಪುರಪುದಲ್ಲಿ ಶನಿವಾರ ನಡೆದ ಭಾಗ್ಯಲಕ್ಷ್ಮೀ ಯೋಜನೆಯ ಸಂದರ್ಭದಲ್ಲಿ ಘಟನೆ ನಡೆದಿತ್ತು. ಶಾಸಕ ಬೆಳ್ಳುಬ್ಬಿ ಬೆಂಬಲಿಗ ಎನ್ನಲಾದ ವ್ಯಕ್ತಿಯೊಬ್ಬ ವೇದಿಕೆ ಸಮೀಪ ಬಂದು ವಿಜಾಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಿ ಎಂದು ಘೋಷಣೆ ಕೂಗಿದ್ದರು.

ಈ ಸಂದರ್ಭದಲ್ಲಿ ಗರಂ ಆದ ಸಿಎಂ, ಜನರು ಮತಕೊಟ್ಟಿದ್ದು ಅವರ ಕಣ್ಣೀರು ಒರೆಸಲಿಕ್ಕಾಗಿ, ಮಂತ್ರಿ ಮಾಡಲು ಅಲ್ಲ; ಎಲ್ಲರನ್ನೂ ಮಂತ್ರಿ ಮಾಡಲು ಆಗುವುದಿಲ್ಲ ಎಂದು ಪರೋಕ್ಷವಾಗಿ ತರಾಟೆ ಮಾಡಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ