ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಂದುವರಿದ ಹೈ ಡ್ರಾಮಾ; ಸಿಎಂ ಜತೆ ಬೆಂಬಲಿಗರ ಪಯಣ (Yadyurappa | Karnataka | BJP | Bangalore)
Bookmark and Share Feedback Print
 
ಯಾವಾಗ ಮುಖ್ಯಮಂತ್ರಿ ಪದತ್ಯಾಗ ಕಾಲ ಸನ್ನಿಹಿತವಾಯಿತೋ ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಬೆಂಬಲಿಗ ಶಾಸಕರು ದೆಹಲಿಗೆ ದೌಡಾಯಿಸಲು ನಿರ್ಧರಿಸಿದ್ದಾರೆ.

ಸಚಿವರಾದ ಅಶೋಕ್, ಆಚಾರ್ಯ, ಉದಾಸಿ, ನಿರಾಣಿ, ರಾಮ್‌ದಾಸ್, ಬಚ್ಚೇಗೌಡ ಮತ್ತು ಸೋಮಣ್ಣ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ರನ್ನು ಮನವೊಳಿಸುವ ಪ್ರಯತ್ನ ನಡೆಸಲಿದ್ದಾರೆ. ಯಡ್ಡಿಯೇ ನಮ್ಮ ನಾಯಕ. ನಾಯಕತ್ವ ಬದಲಾವಣೆ ಅಸಾಧ್ಯ ಎಂಬ ಪಟ್ಟುಹಿಡಿಯುವ ಸಾಧ್ಯತೆಯಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನನ್ನ ಜತೆ ಯಾವ ಸಚಿವರು ಅಥವಾ ಶಾಸಕರು ಬರಲ್ಲ ಎಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಆದರೆ ಸಿಎಂ ರಾಜಿನಾಮೆ ಹೈಕಮಾಂಡ್ ಬಯಸಿದ್ದರ ಹಿನ್ನಲೆಯಲ್ಲಿ ಸ್ವಇಚ್ಚೆಯಿಂದ ಸಚಿವರೆಲ್ಲರು ದೆಹಲಿಗೆ ತೆರಳುತ್ತಿದ್ದಾರೆ.

ನಿತಿನ್ ಗಡ್ಕರಿ ಅವರನ್ನು ಮೊದಲು ಭೇಟಿ ಮಾಡಲಿರುವ ಸಚಿವರು ನಂತರ ಅಗತ್ಯ ಬಿದ್ದಲ್ಲಿ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಭೇಟಿ ಮಾಡುವ ಸಾಧ್ಯತೆಯಿದೆ.

ಇದೀಗ ಸಿಎಂ ಕುರ್ಚಿ ಉಳಿಸುವ ಅಂತಿಮ ಪ್ರಯತ್ನವಾಗಿ ಸಂಖ್ಯಾ ಬಲದ ಮೂಲಕ ಹೈಕಮಾಂಡ್ ಮನವರಿಕೆ ಮಾಡಲು ಸಿಎಂ ಯತ್ನಿಸಲಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ