ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನ್ನ ಕಾಲದ ಡಿನೋಟಿಫಿಕೇಷನ್ ತನಿಖೆಯಾಗ್ಲಿ: ಎಸ್.ಎಂ.ಕೃಷ್ಣ (SM krishna | BJP | Congress | Yeddyurappa | BDS | KIADB)
Bookmark and Share Feedback Print
 
ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಗಿರುವ ಡಿನೋಟಿಫಿಕೇಷನ್ ಪ್ರಕರಣಗಳ ಕುರಿತು ಬಿಜೆಪಿ ಸರಕಾರ ತನಿಖೆ ಮಾಡುವುದಿದ್ದರೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.

ಖಾಸಗಿ ಭೇಟಿಗಾಗಿ ಶುಕ್ರವಾರ ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಡಿನೋಟಿಫಿಕೇಷನ್ ಕುರಿತು ಅಸೆಂಬ್ಲಿಯಲ್ಲಿ ಈಗಾಗಲೇ ಚರ್ಚೆಯಾಗಿದ್ದ, ಉತ್ತರವನ್ನು ನೀಡಲಾಗಿದೆ ಎಂದರು.

ಅವೆಲ್ಲವೂ ವಿಧಾನಮಂಡಲದ ಕಡತದಲ್ಲಿ ದಾಖಲಾಗಿದೆ. ಓದುವ ಹವ್ಯಾಸ ಮತ್ತು ವ್ಯವಧಾನ ಇದ್ದವರು ನೋಡಿಕೊಳ್ಳಬಹುದು. ತನಿಖೆ ಮಾಡುತ್ತೇವೆ ಎಂದರೆ ಅಗತ್ಯವಾಗಿ ಮಾಡಬಹುದು ಎಂದು ತಿರುಗೇಟು ನೀಡಿದ್ದಾರೆ. ಭೂ ಹಗರಣ, ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಮಧ್ಯ ಪ್ರವೇಶಿಸುವ ಪ್ರಶ್ನೆಯೇ ಇಲ್ಲ ಎಂದು ಪರೋಕ್ಷವಾಗಿ ಸಚಿವ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ