ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಿವರಾಜ್ ತಂಗಡಗಿ ಮೋಸಗಾರ: ಶ್ರೀರಾಮುಲು ಕಿಡಿ (Shiv raj thangadgi | Sri ramulu | BJP | Janardana Reddy | Yeddyurappa)
Bookmark and Share Feedback Print
 
ಮತದಾರರ ಆಶೀರ್ವಾದದಿಂದ ಗೆದ್ದು, ನಮ್ಮಿಂದ ಮಂತ್ರಿ ಸ್ಥಾನ ಪಡೆದ ಶಿವರಾಜ ತಂಗಡಗಿ ಸುಳ್ಳ ಹಾಗೂ ಮೋಸಗಾರ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ.

ಇಲ್ಲಿನ ಎಪಿಎಂಸಿ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಯಡಿಯೂರಪ್ಪ ಸರಕಾರ ತಂಗಡಗಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಪಟ್ಟ, ರೈಸ್ಪಾರ್ಕ್, ಕನಕಗಿರಿ ಉತ್ಸವ, ನೀರಾವರಿ ಯೋಜನೆಗೆ ಸರ್ವೆ ಸೇರಿದಂತೆ ನಾನಾ ಯೋಜನೆ ಮತ್ತು ಹೆಚ್ಚಿನ ಅನುದಾನ ನೀಡಿತ್ತು. ಆದರೆ, ದುರಾಡಳಿತ ಮತ್ತು ಅತಿ ಆಸೆಯಿಂದ ಸರಕಾರ ಹಾಗೂ ಜನತೆಗೆ ವಂಚಿಸಿ ಬಂಡಾಯವೆದ್ದು, ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

ತಂಗಡಗಿ ವಿರುದ್ಧ ಸಡ್ಡು ಹೊಡೆದು ಮುಂದಿನ ಉಪ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದವರನ್ನೇ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿ ಸಚಿವ ಸ್ಥಾನ ನೀಡುವುದು ಶತಃಸಿದ್ಧ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಮಾತನಾಡಿದ್ದೇವೆ ಎಂದರು.

ಕೇಂದ್ರ ಸರಕಾರದ ಹಗರಣ ಮುಚ್ಚಿಡಲು ಯತ್ನಿಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು, ರಾಜ್ಯ ಬಿಜೆಪಿ ಸರಕಾರವನ್ನು ಉರುಳಿಸಲು ಸಂಚು ನಡೆಸಿದ್ದಾರೆ. ಈ ಎಲ್ಲ ನಾಟಕವನ್ನು ಜನರು ನೋಡಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ