ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಗವರ್ನರ್ ಕಚೇರಿ ಗುಮಾಸ್ತರಲ್ಲ: ಸುರೇಶ್ ಕುಮಾರ್ (H R Bhardwaj | corrupt Karnataka | Yeddyurappa | Suresh kumar | Govrnor)
Bookmark and Share Feedback Print
 
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪತ್ರದ ಅಪ್ಪಣೆಯಂತೆ ಕುಣಿಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಕಚೇರಿ ಗುಮಾಸ್ತರಲ್ಲ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಣಸಮಟ್ಟಿ ಗ್ರಾಮ ಮತ್ತು ತಾಂಡಾದಲ್ಲಿ ಜಿಪಂ, ತಾಪಂ ಚುನಾವಣಾ ಪ್ರಚಾರ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನಾದೇಶದ ಮೂಲಕ ಆಡಳಿತ ನಡೆಸುತ್ತಿರುವ ರಾಜ್ಯ ಸರಕಾರಕ್ಕೆ ಪದೇ ಪದೇ ಕಿರುಕುಳ ನೀಡುತ್ತಿರುವ ರಾಜ್ಯಪಾಲ ಭಾರದ್ವಾಜ್ ಪತ್ರ ವ್ಯವಹಾರ ಅವರ ಘನತೆಗೆ ತಕ್ಕುದಾಗಿಲ್ಲ. ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾದ ರಾಜ್ಯಾಪಾಲರನ್ನು ಬಿಜೆಪಿ ಅಪಾರ ಗೌರವದಿಂದ ಕಾಣುತ್ತಾ ಬಂದಿದೆ ಎಂದರು.

ರಾಜ್ಯ ಸರಕಾರದ ಬಗ್ಗೆ ಪೂರ್ವಾಗ್ರಹ ಪೀಡಿತರಾದ ರಾಜ್ಯಪಾಲ ಭಾರದ್ವಾಜ್ ಅವರು ಸಿಎಂಗೆ ಪತ್ರಗಳ ಮೂಲಕ ಟೀಕೆ, ಆರೋಪ ಮಾಡುತ್ತ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದಾರೆಂದು ಆರೋಪಿಸಿದರು. ಕಾನೂನು ತಜ್ಞರು, ಹಿರಿಯ ರಾಜಕಾರಣಿ ಆಗಿರುವ ರಾಜ್ಯಪಾಲರು ಸಹನೆ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ