ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಗೌರವ, ನಂಬಿಕೆ ಉಳಿಸಿಕೊಳ್ಳಲಿ: ಗೂಳಿಹಟ್ಟಿ ಶೇಖರ್ (Guli hutty Shekar | BJP | Yeddyurappa | Kumaraswamy | Siddaramaiah)
Bookmark and Share Feedback Print
 
'ಪಕ್ಷೇತರರ ಬಗ್ಗೆ ಕೀಳಾಗಿ ಮಾತನಾಡುವ ಯಡಿಯೂರಪ್ಪನವರೇ, ನಿಮಗೆ ಸಿಎಂ ಸ್ಥಾನ ಸಿಗಲು ಪಕ್ಷೇತರರು ಕಾರಣರಲ್ಲವೇ? ನಮ್ಮ ಬೆಂಬಲದಿಂದ ಆ ಕುರ್ಚಿಯಲ್ಲಿ ಕುಳಿತಿದ್ದೀರಿ ಎಂಬುದನ್ನು ಮರೆಯಬೇಡಿ...ಇದು ಅನರ್ಹ ಶಾಸಕ ಗೂಳಿಹಟ್ಟಿ ಶೇಖರ್ ಸಿಎಂ ವಿರುದ್ಧ ಗುಟುರು ಹಾಕಿದ ಪರಿಯಿದು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾವಾವೇಶದಿಂದ ಮಾತನಾಡಿದ ಅವರು, ಪಕ್ಷೇತರರು ಬೆಂಬಲ ಸೂಚಿಸಿದ್ದರಿಂದ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರ ಹಿಡಿಯಿತು. ಹಾಗಾಗಿ ಸಿಎಂ ಸ್ಥಾನ ಪಕ್ಷೇತರರು ಕೊಟ್ಟಿದ್ದು. ಆದರೆ ಯಡಿಯೂರಪ್ಪ ಎಂದೂ ಇದನ್ನು ಹೇಳದೆ ನಾವು ಪಕ್ಷೇತರರನ್ನು ಮಂತ್ರಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಸ್ಥಾನ ಭದ್ರಪಡಿಸಿಕೊಂಡ ನಂತರ ಅವರನ್ನೇ ಅನರ್ಹಗೊಳಿಸಿದರು. ಆಗಲೂ ಅವರ ಸ್ಥಾನ ಉಳಿಯಬೇಕಾದರೆ ಮತ್ತೆ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಬೇಕಾಯಿತು. ಅವರಿಗಾದರೂ ಮಂತ್ರಿ ಸ್ಥಾನ ನೀಡಿ ಗೌರವ, ನಂಬಿಕೆ ಉಳಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಅಂದು ಪಕ್ಷೇತರರು ಜೆಡಿಎಸ್ ಅಥವಾ ಕಾಂಗ್ರೆಸ್ ಬೆಂಬಲಿಸಿದ್ದಿದ್ದರೆ ಕುಮಾರಸ್ವಾಮಿ ಇಲ್ಲವೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದರು. ಯಡಿಯೂರಪ್ಪ ಅವರಿಗೆ ಆ ಸ್ಥಾನ ಕನಸಾಗಿಯೇ ಉಳಿಯುತ್ತಿತ್ತು. ಅಂದು ಪಕ್ಷೇತರರು ಬಿಜೆಪಿ ಬೆಂಬಲಿಸಿ ತಪ್ಪು ಮಾಡಿದರು. ಅದಕ್ಕೆ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದೇವೆ. ಪಕ್ಷೇತರರಿಗೆ ಮೋಸ ಮಾಡಿದವರು ನಾಶವಾಗುತ್ತಾರೆ. ಈ ಸರಕಾರ ಶೀಘ್ರ ಪತನವಾಗಲಿದೆ. ನೈತಿಕತೆ ಇದ್ದರೆ ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಲಿ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ