ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ಪೆಕ್ಟ್ರಂ ಹಗರಣದಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ: ಆಸ್ಕರ್ ಫರ್ನಾಂಡಿಸ್ (2g Spectrum | Congress | JDS | BJP | Oscar Fernandis)
Bookmark and Share Feedback Print
 
ಸ್ಪೆಕ್ಟ್ರಂ ಹಗರಣದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೇನೂ ಇಲ್ಲ. ಹಗರಣದಲ್ಲಿ ಶಾಮೀಲಾದ ಸಚಿವರ ರಾಜೀನಾಮೆ ಪಡೆಯಲಾಗಿದ್ದು, ಈಗ ನಡೆಯುತ್ತಿರುವ ಉನ್ನತ ಮಟ್ಟದ ತನಿಖೆ ಪೂರ್ಣಗೊಂಡ ಬಳಿಕ ನಿಜಾಂಶ ಬೆಳಕಿಗೆ ಬರಲಿದೆ ಎಂದು ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು.

ಅವರು ಬೈಕಂಪಾಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ, ರಾಜ್ಯದ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಬಗ್ಗೆ ಜನತೆ ನೀಡಿದ ತೀರ್ಪನ್ನು ಪಕ್ಷ ಗೌರವದಿಂದ ಸ್ವೀಕರಿಸಲಿದ್ದು, ತಪ್ಪುಗಳನ್ನು ತಿದ್ದಿಕೊಂಡು ಪಕ್ಷ ಮುಂದಡಿ ಇಡಲಿದೆ ಎಂದು ಅವರು ಹೇಳಿದರು. ಆಡಳಿತ ಪಕ್ಷ ಬಿಜೆಪಿ ಶೇ.40ರಿಂದ 50ರಷ್ಟು ಮತಗಳನ್ನು ಮಾತ್ರ ಗಳಿಸಿದ್ದು ಇದು ದೊಡ್ಡ ಸಾಧನೆಯಲ್ಲ ಎಂದರು.

ಚಿತ್ರಾಪುರ ಬಳಿ ಮೀನುಗಾರರ ಅನುಕೂಲತೆಗಾಗಿ ನಿರ್ಮಿಸಲುದ್ದೇಶಿಲಾಗಿರುವ ಸರ್ವಋತು ಮೀನುಗಾರಿಕೆ ಜೆಟ್ಟಿ ಯೋಜನೆ ನನೆಗುದಿಗೆ ಬಿದ್ದಿರುವುದಕ್ಕೆ ರಾಜ್ಯ ಸರಕಾರ ಸೂಕ್ತ ಮೂಲ ಸೌಕರ್ಯ ಒದಗಿಸಲು ವಿಫಲವಾಗಿರುವುದೇ ಕಾರಣ. ಆದರೂ ಈ ಯೋಜನೆ ಬಗ್ಗೆ ಪರಿಶೀಲನೆ ನಡೆಸಲು ತಾನು ಸಿದ್ಧ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ