ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಸ್ಪೃಶ್ಯತೆ ಸವರ್ಣಿಯರಲ್ಲೇ ಹೊರತು ದಲಿತ ಕೇರಿಗಳಲ್ಲಲ್ಲ: ಸ್ವಾಮೀಜಿ (Pejavar shree | Dalith | Udupi | Swamiji | Congress)
Bookmark and Share Feedback Print
 
ಸಮಾಜದಲ್ಲಿ ಅಸ್ಪೃಶ್ಯತೆ ಇರುವುದು ಸವರ್ಣಿಯರಲ್ಲೇ ಹೊರತು ದಲಿತ ಕೇರಿಗಳಲ್ಲಲ್ಲ. ಆದ್ದರಿಂದ ದಲಿತರ ಕೇರಿಗಳಲ್ಲಿ ಪೇಜಾವರ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿರುವುದು ಅನವಶ್ಯಕ ಎಂದು ಚಿತ್ರದುರ್ಗ ಛಲವಾದಿ ಸಂಸ್ಥಾನ ಮಠದ ಶ್ರೀ ಬಸವನಾಗಿ ದೇವ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತರಲ್ಲಿ ಸಂಸ್ಕಾರ, ನೈತಿಕತೆ ಬೆಳೆಯದ ಹೊರತು ಸರಕಾರ ಅವರ ಅಭಿವೃದ್ಧಿಗೆ ಏನೇ ಕೊಡುಗೆ ನೀಡಿದರೂ ಪ್ರಯೋಜನವಿಲ್ಲ. ದಲಿತರಲ್ಲಿ ವೈಚಾರಿಕತೆ, ವಿಜ್ಞಾನದ ಬಗ್ಗೆ ಅರಿವು ಜತೆಗೆ ನೈತಿಕತೆ ಮೂಡಿಸುವ ನಿಟ್ಟಿನಲ್ಲಿ ಮಠ ಕಾರ್ಯನಿರ್ವಹಿಸುತ್ತಿದೆ ಎಂದರು.

ರಾಜ್ಯದೆಲ್ಲೆಡೆ ದಲಿತರಲ್ಲಿ ಆತ್ಮಾಭಿಮಾನ ಬಡಿದೆಬ್ಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ವಾರದಿಂದ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ