ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಗೆಲ್ಲಲಿ, ಸೋಲಲಿ ಸರಕಾರ ಬೀಳಲ್ಲ: ಈಶ್ವರಪ್ಪ (BJP | Yeddyurappa | Ishwarappa | by poll | congress | JDS)
WD
ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತಾಲೂಕಿನ ಕಸಬಾ ಜಿಪಂ ಕ್ಷೇತ್ರದ ಹನುಮಂತರಾಯನದಿನ್ನೆ ಗ್ರಾಮದಲ್ಲಿ ಶುಕ್ರವಾರ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೂರು ಕ್ಷೇತ್ರಗಳ ಫಲಿತಾಂಶ ಬಿಜೆಪಿ ಪರ ಅಥವಾ ವಿರುದ್ಧವಾಗಿ ಬಂದರೂ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

ಆ ನಿಟ್ಟಿನಲ್ಲಿ ಉಳಿದ ಎರಡು ವರ್ಷ ಆಡಳಿತಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ. ಫಲಿತಾಂಶ ಸರಕಾರದ ಪರ ಬಂದರೆ ಜನ ಬೆಂಬಲ ಸರಕಾರಕ್ಕಿದೆ ಎಂಬ ಸಂದೇಶ ಹೋಗುತ್ತದೆ. ಆರು ದಶಕಗಳಿಂದ ಜನರ ಹಿತ ಮರೆತಿದ್ದಕ್ಕೆ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿದ್ದರೂ ಬುದ್ದಿ ಬಂದಿಲ್ಲ. ಅವರು ಮತ್ತೆ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಇವನ್ನೂ ಓದಿ