ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಸ್.ಎಂ.ಕೃಷ್ಣ ಸಚಿವಗಿರಿ ತಪ್ಪಿಸಲು ಯತ್ನಿಸಿದ್ದ ವಿಶ್ವನಾಥ್: ಡಿಕೆಶಿ (SM krishna | DK shivkumar | Mysore | Congress | KPCC | Vishwanath)
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗುವುದನ್ನು ತಪ್ಪಿಸಲು ಸಂಸದ ಎಚ್.ವಿಶ್ವನಾಥ್ ಯತ್ನಿಸಿದ್ದರು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಆರೋಪಿಸಿದರು.

ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದಿಂದ ಭಾನುವಾರ ಆಯೋಜಿಸಿದ್ದ ಒಕ್ಕಲಿಗ ಜನಾಂಗದ ಜಿ.ಪಂ., ತಾ.ಪಂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕೃಷ್ಣ ಅವರಿಗೆ ತೊಂದರೆ ಕೊಡಬೇಕೆಂದು ವಿಶ್ವನಾಥ್ ಹಳ್ಳಿ ಹಕ್ಕಿಯ ಹಾಡು ಬರೆದರು. ಅದರಲ್ಲಿ ಕೃಷ್ಣ ಬಗ್ಗೆ ಏನೇನೋ ಬರೆದರು. ಹೀಗೆ ಬರೆಯುವುದು ವಿಶ್ವನಾಥ್‌ಗೊಂದು ಚಟ. ಆದರೆ, ಕೃಷ್ಣ ಅವರು ವಿದೇಶಾಂಗ ಸಚಿವರಾಗುವುದನ್ನು ತಪ್ಪಿಸಲಾಗಲಿಲ್ಲ ಎಂದು ಹೇಳಿದರು.

ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಇನ್ನೂ ಒಂದೂವರೆ ಸಾವಿರ ಸಮಾಜದ ಮಂದಿಗೆ ನಿವೇಶನ ನೀಡಲು ಪಟ್ಟಿ ಸಿದ್ದಪಡಿಸಿದ್ದೆ. ಅದಕ್ಕೂ ವಿಶ್ವನಾಥ್ ಅಡ್ಡಿಯಾದರು ಎಂದು ಡಿಕೆಶಿ ಆರೋಪಿಸಿದರು.

ತಮ್ಮ ಟ್ರಸ್ಟ್‌ನಿಂದ ಮುಂದಿನ ತಿಂಗಳು ರಾಜಕೀಯ ತರಬೇತಿ ಸಂಸ್ಥೆ ಆರಂಭಿಸುವುದಾಗಿ ತಿಳಿಸಿದ ಡಿಕೆಶಿ, ಇದೊಂದು ನಾಯಕರನ್ನು ತಯಾರು ಮಾಡುವ ಸಂಸ್ಥೆಯಾಗಲಿದೆ ಎಂದು ತಿಳಿಸಿದರು.
ಇವನ್ನೂ ಓದಿ