ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಸೇಫ್...ಈಗ ಎಲ್ಲರ ಚಿತ್ತ ಗವರ್ನರತ್ತ (BJP | Yeddyurappa | Bharadwaj | Congress | JDS | Manmohan singh)
ಬಿಜೆಪಿ ಭಿನ್ನ ಶಾಸಕರು ಬೆಂಬಲ ಘೋಷಿಸಿದ ಬೆನ್ನಲ್ಲೇ ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನಗೊಂಡಂತಾಗಿದ್ದರೂ ಕೂಡ ಇದೀಗ ಎಲ್ಲರ ಚಿತ್ತ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರತ್ತ ನೆಟ್ಟಿದೆ.

ಬಿಜೆಪಿ ಸರಕಾರ ಮತ್ತೆ ಇಕ್ಕಟ್ಟಿಗೆ ಸಿಲುಕುತ್ತದೆಯೇ ಅಥವಾ ರಾಜ್ಯಪಾಲರು ಮೃಧು ಧೋರಣೆ ತಳೆಯುತ್ತಾರಾ ಎಂಬುದನ್ನು ಅರಿಯಲು ಎಲ್ಲ ರಾಜಕೀಯ ಪಕ್ಷಗಳು ರಾಜಭವನದತ್ತ ಮುಖ ಮಾಡಿದ್ದರಿಂದ ಭಾನುವಾರ ಸಂಜೆ ರಾಜಭವನ ಚಟುವಟಿಕೆಯ ಕೇಂದ್ರ ಬಿಂದುವಾಗಿತ್ತು.

ನವದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿರುವ ರಾಜ್ಯಪಾಲ ಭಾರದ್ವಾಜ್ ಅವರನ್ನು ಭೇಟಿಯಾಗಲು ನಾ ಮುಂದೆ, ತಾ ಮುಂದೆ ಎಂದು ಕಾಂಗ್ರೆಸ್ ನಾಯಕರು, ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ.

ಈಗಾಗಲೇ ಪ್ರಧಾನಿಯನ್ನು ಭೇಟಿ ಮಾಡಿ ರಾಜ್ಯರಾಜಕಾರಣ ಬೆಳವಣಿಗೆ ಬಗ್ಗೆ ವಿವರ ನೀಡಿರುವ ರಾಜ್ಯಪಾಲರಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಹಸಿರು ನಿಶಾನೆ ಸಿಕ್ಕಿದೆ ಎನ್ನಲಾಗಿದೆ. ರಾಜ್ಯಪಾಲರು ನಾಳೆ ನಡೆಯುವ ಅಧಿವೇಶನಕ್ಕೆ ಅವಕಾಶ ಕೊಟ್ಟರೆ ಎಲ್ಲವೂ ಸುಸೂತ್ರ. ಆದರೆ, ನಿರಾಕರಿಸಿದರೆ ಪುನಃ ರಾಜ್ಯರಾಜಕಾರಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ.
ಇವನ್ನೂ ಓದಿ