ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಏನೇ ಹೇಳ್ಲಿ, ಅಮ್ಮ ಸುಷ್ಮಾ ನಮ್ಮ ದೇವರು: ಶ್ರೀರಾಮುಲು (Shushma swaraj | Reddy Brothers | Sri ramulu | Yeddyurappa)
PR
ಅಮ್ಮ ಸುಷ್ಮಾ ಸ್ವರಾಜ್ ನಮ್ಮ ಪಾಲಿನ ದೇವರು. ನಮ್ಮ ಮನೆಯ ಯಜಮಾನಿ. ತಾಯಿ ಎಷ್ಟೇ ಬೈದರೂ ಕೋಪಿಸಿಕೊಳ್ಳುವುದಿಲ್ಲ. ಮನೆಗೆ ಬರಬೇಡ ಎಂದು ಬಾಗಿಲು ಹಾಕಿದರೂ ನಾವು ಅವರ ಮನೆಗೆ ಹೋಗೋದು ಬಿಡಲ್ಲ...ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ರೆಡ್ಡಿ ಸಹೋದರರ ಆಪ್ತಮಿತ್ರ ಬಿ.ಶ್ರೀರಾಮುಲು ಪ್ರತಿಕ್ರಿಯೆ.

ರೆಡ್ಡಿ ಸಹೋದರರ ರಕ್ಷಕಿ ನಾನಲ್ಲ, ಅವರ ಬೆಳವಣಿಗೆಗೂ ನಾನು ಕಾರಣವಲ್ಲ ಎಂದು ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಇತ್ತೀಚೆಗೆ ಔಟ್ ಲುಕ್ ಪತ್ರಿಕೆ ನೀಡಿದ ಸಂದರ್ಶನ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಈ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದ ಸಚಿವ ಶ್ರೀರಾಮುಲು ಈ ರೀತಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ರಾಜಕೀಯ ಪರಿಸ್ಥಿತಿಯಿಂದಾಗಿ ಸುಷ್ಮಾ ಸ್ವರಾಜ್ ಆ ರೀತಿ ಹೇಳಿಕೆ ನೀಡಿರಬಹುದು. ನಮ್ಮ ಸಂಬಂಧ ಬೇರೆಯೇ ಇದೆ. ತಮ್ಮೆಲ್ಲರ ಬೆಳವಣಿಗೆ ಹಿಂದೆ ತಾಯಿಯ ಆಶೀರ್ವಾದ ಇದೆ. ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಮುನ್ನಡೆಯುತ್ತೇವೆ ಎಂದರು.

ಸುಷ್ಮಾ ಸ್ವರಾಜ್ ಜತೆಗಿನ ರಾಜಕೀಯ ಸಂಬಂಧವೇ ಬೇರೆ. ವೈಯಕ್ತಿಕ ಸಂಬಂಧವೇ ಬೇರೆ. ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಬೆಳವಣಿಗೆಗೆ ತಾಯಿ ಸುಷ್ಮಾ ಸ್ವರಾಜ್ ಅವರೇ ಕಾರಣ. ಅನ್ಯರು ಅದೇನೇ ಹೇಳಿದರೂ ಅವರೇ ನಮ್ಮ ಪಾಲಿನ ದೇವರು ಎಂದು ತಿಳಿಸಿದರು.
ಇವನ್ನೂ ಓದಿ