ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಾಬಾ ರಾಮದೇವ್ ಉಗ್ರಗಾಮಿ ಆಗ್ತಿದ್ದಾರೆ: ಪೂಜಾರಿ ಕಿಡಿ (Ram dev | Black money | Congress | Janardana Poojary | Pejavar shree)
ಕಪ್ಪು ಹಣ ವಾಪಸಾತಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಯೋಗ ಗುರು ಬಾಬಾ ರಾಮದೇವ್ ಅವರು ಉಗ್ರಗಾಮಿ ಆಗುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹೆಸರಿನಲ್ಲಿ ಬಾಬಾ ರಾಮದೇವ್ ಅವರು ಹಿಂಸೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ತನ್ನ ರಕ್ಷಣೆಗಾಗಿಯೇ 11ಸಾವಿರ ಮಂದಿ ಶಸ್ತ್ರಾಸ್ತ್ರ ಪಡೆಯನ್ನು ರಚಿಸುವುದಾಗಿ ಹೇಳುವ ಬಾಬಾ ಅವರಿಗೆ ಹೋರಾಟ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ಅಲ್ಲದೇ ಬಾಬಾ ರಾಮದೇವ್ ಅವರು ಗುರುವಾರ ಸಂಜೆ ತಮ್ಮ ಆಸ್ತಿ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿ, ತಮ್ಮ ಎಲ್ಲಾ ಲೆಕ್ಕಚಾರವೂ ಪಾರದರ್ಶಕವಾಗಿದೆ ಎಂದು ಹೇಳಿದ್ದರು. ಆದರೆ ಅವರು ಸಂಪೂರ್ಣ ಆಸ್ತಿಯ ವಿವರನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿರುವ ಪೂಜಾರಿ, ಬಾಬಾ ಸಂಪೂರ್ಣ ಆಸ್ತಿಯ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಅದೇ ರೀತಿ ಬಾಬಾ ರಾಮದೇವ್ ಅವರಿಗೆ ಸಾಥ್ ನೀಡುವ ಪೇಜಾವರಶ್ರೀಗಳು ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರದ ವಿರುದ್ಧವೂ ಹೋರಾಟ ರೂಪಿಸಲಿ ಎಂದು ಕಿಡಿಕಾರಿದರು. ಭ್ರಷ್ಟಾಚಾರ ಎಲ್ಲೆಡೆ ಇದೆ, ಹಾಗಂತ ರಾಜ್ಯದಲ್ಲಿಯೇ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ನಡೆದಿರುವುದು ಗೊತ್ತಿದ್ದೂ, ಆ ಬಗ್ಗೆ ಒಂದೇ ಒಂದು ಶಬ್ದ ಮಾತನಾಡದೆ ಇರುವ ಪೇಜಾವರಶ್ರೀಗಳು ಮೊದಲು ರಾಜ್ಯದಲ್ಲಿ ಹೋರಾಟ ನಡೆಸಲಿ ಎಂದು ಸಲಹೆ ನೀಡಿದ್ದಾರೆ.
ಇವನ್ನೂ ಓದಿ