ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ತಲೆಬೋಳಿಸಿಕೊಂಡು ಹೋಗ್ಲಿ: ಸಿದ್ದರಾಮಯ್ಯ (BJP | Yeddyurappa | Siddaramaiah | Bangalore | Karnataka | Kannada News | Congress)
siddaramaiah
PR
ಭೂ ಹಗರಣದಲ್ಲಿ ಭಾಗಿಯಾಗಿ ಕೋರ್ಟ್ ಕಟಕಟೆ ಏರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ, ಜನರಿಂದ ಶೇಮ್...ಶೇಮ್ ಅನ್ನಿಸಿಕೊಂಡ ಯಡಿಯೂರಪ್ಪ ತಲೆ ಬೋಳಿಸಿಕೊಂಡು ಮನೆಗೆ ಹೋಗುವುದು ಉತ್ತಮ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಾಡಿದ ತಪ್ಪಿಗೆ ನ್ಯಾಯಾಲಯದ ಕಟಕಟೆ ಏರಿ ಜನರಿಂದ ಛೀಮಾರಿ ಹಾಕಿಸಿಕೊಂಡ ಯಡಿಯೂರಪ್ಪಗೆ ಮಾನ ಮರ್ಯಾದೆ ಇದ್ದರೆ ತಲೆ ಬೋಳಿಸಿಕೊಂಡು ಮನೆಗೆ ಹೋಗಲಿ. ಮೂರು ಬಿಟ್ಟಿದ್ದೇವೆ ಎಂದರೆ ಜನರೇ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದರು.

ಬಿಜೆಪಿ ಸರ್ಕಾರ ಹೆಚ್ಚೆಂದರೆ ಐದು, ಆರು ತಿಂಗಳು ಇರುವುದು ಕಷ್ಟ. ಆಮೇಲೆ ಜೈಲಿಗೆ ಹೋದ ಪಕ್ಷದವರು ಆಡಳಿತ ನಡೆಸಲು ಲಾಯಕ್ಕಾ ಅಥವಾ ನಾಲಾಯಕ್ಕಾ ಎನ್ನುವುದನ್ನು ಜನರೇ ಚುನಾವಣೆಯಲ್ಲಿ ನಿರ್ಧರಿಸುತ್ತಾರೆ ಎಂದು ಭವಿಷ್ಯ ನುಡಿದರು.

ಪದ್ಮನಾಭ ವಿಧಾನಸಭಾ ಕ್ಷೇತ್ರದ ಯಾರಬ್ ನಗರದಲ್ಲಿ ಮಂಗಳವಾರ ಕೆಪಿಸಿಸಿ ಸದಸ್ಯ ಬಿ.ಗುರಪ್ಪನಾಯ್ಡು ಅವರು ರಂಜಾನ್ ಅಂಗವಾಗಿ ಬಡ ಮುಸ್ಲಿಮ್ ಬಾಂಧವರಿಗೆ ನೀಡಿದ 2000 ಸಾವಿರಕ್ಕೂ ಹೆಚ್ಚು ಆಹಾರ ಧಾನ್ಯಗಳ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಯಡಿಯೂರಪ್ಪ ಅವರ ಸೂತ್ರದ ಗೊಂಬೆ. ಅವರಿಗೆ ಹಲ್ಲು ಬಿಡುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದಿರುವ ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರು ಜೈಲು ಸೇರುತ್ತಾರೆ ಎಂದ ಅವರು, ಯಡಿಯೂರಪ್ಪ ಹಾಗೂ ರೆಡ್ಡಿಗಳು ಅಧಿಕಾರ ಕಳೆದುಕೊಳ್ಳಲು ಕಾಂಗ್ರೆಸ್ ಪಾದಯಾತ್ರೆಯೇ ಪ್ರಮುಖ ಕಾರಣವೆಂದು ಅವರು ಹೇಳಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ಯಡಿಯೂರಪ್ಪ, ಸಿದ್ದರಾಮಯ್ಯ, ಬೆಂಗಳೂರು, ಕರ್ನಾಟಕ, ಕನ್ನಡ ಸುದ್ದಿ, ಕಾಂಗ್ರೆಸ್