ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಕೈಕೊಟ್ಟ ಅದೃಷ್ಟ; ಜನಾರ್ದನ ರೆಡ್ಡಿ ಎಸ್ಕೇಪ್ ಪ್ಲ್ಯಾನ್ ಠುಸ್! (Janardana Reddy | CBI | Bellary | Arrest | Illegal Mining | Latest News in Kannada | Karnataka News | Latest Karnataka News | Bangalore | Bangalore N)
Janardana Reddy
WD
ಅದೃಷ್ಟ ಕೈಕೊಟ್ಟಾಗ ಶನಿ ಹೆಗಲೇರುತ್ತಾನೆ ಎಂಬಂತೆ ಸಿಬಿಐ ದಾಳಿ ನಡೆಯುತ್ತದೆ ಎಂಬ ಮುನ್ಸೂಚನೆ ಅರಿತ ಬಳ್ಳಾರಿ ಗಣಿಧಣಿ ವಿದೇಶಕ್ಕೆ ಎಸ್ಕೇಪ್ ಆಗುವ ಯೋಜನೆ ಹಾಕಿದ್ದರು. ಆದರೆ ಸಿಬಿಐ ಸೋಮವಾರ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸುವ ಮೂಲಕ ಜನಾರ್ದನ ರೆಡ್ಡಿ ಲೆಕ್ಕಚಾರ ತಲೆಕೆಳಗಾಗಿದ್ದು, ಜೈಲಿನಲ್ಲಿ ಕಾಲಕಳೆಯುವಂತಾಗಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಓಬಳಾಪುರಂ ಮೈನಿಂಗ್ ಕಂಪನಿ ಎಸಗಿರುವ ಅಕ್ರಮಗಳ ಬಗ್ಗೆ ಸಿಬಿಐ ಅಧಿಕಾರಿಗಳು ಬೆನ್ನಹಿಂದೆ ಬಿದ್ದಿದ್ದಾರೆ ಎಂಬ ಸುಳಿವು ಪಡೆದಿದ್ದ ಜನಾರ್ದನ ರೆಡ್ಡಿ ಇಂಡೋನೇಷ್ಯಾಕ್ಕೆ ತೆರಳಲು ತಯಾರಾಗಿದ್ದರು. ಅಲ್ಲದೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರೂ, ತಾನು ಸಿಗಬಾರದು, ಮಾಧ್ಯಮಗಳಿಗೂ ಈ ಸುದ್ದಿ ತಿಳಿಯಬಾರದು ಎಂಬ ಮಾಸ್ಟರ್ ಪ್ಲಾನ್ ಮಾಡಿ ಶ್ರೀರಾಮುಲು ರಾಜೀನಾಮೆ ಪ್ರಹಸನಕ್ಕೆ ಚಾಲನೆ ಕೊಟ್ಟಿದ್ದರು. ಆದರೆ ಅವೆಲ್ಲ ಈಗ ಲೆಕ್ಕಚಾರ ಉಲ್ಟಾಪಲ್ಟಾ ಆಗಿದೆ.

ಶ್ರೀರಾಮುಲು ರಾಜೀನಾಮೆ ನಿಟ್ಟಿನಲ್ಲಿ ಸೋಮವಾರ ದೆಹಲಿಯ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಇಂಡೋನೇಷ್ಯಾಕ್ಕೆ ಹೊರಡಲು ಸಿದ್ದತೆ ನಡೆಸಿದ್ದರು ಎನ್ನಲಾಗಿದೆ. ಭಾನುವಾರ ಬೆಂಗಳೂರಿನಲ್ಲಿಯೇ ಇರಬೇಕಿದ್ದ ರೆಡ್ಡಿ, ಶ್ರೀರಾಮುಲು ನಾಟಕದಿಂದ ಬೇಸತ್ತ ನಗರ ಪಾಲಿಕೆ ಸದಸ್ಯರು ರಾಜೀನಾಮೆ ನೀಡುವ ನಿರ್ಧಾರದ ಬಗ್ಗೆ ಚರ್ಚೆ ನಡೆಸಲು ಬಳ್ಳಾರಿಗೆ ವಾಪಸ್ ಆಗಿದ್ದರು.

ಸಿಬಿಐ ದಾಳಿ ಹಾಗೂ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ವಿದೇಶಕ್ಕೆ ಹಾರುವ ಯೋಜನೆಯನ್ನು ರೆಡ್ಡಿ ಸೋಮವಾರ ಸಂಜೆಗೆ ಮುಂದೂಡಿದ್ದರು. ಆದರೆ ಸೋಮವಾರ ಬೆಳಗ್ಗೆ ಬಂಧನಕ್ಕೆ ಒಳಗಾಗುವ ಮೂಲಕ ರೆಡ್ಡಿ ಪಾಳಯ ಆಘಾತಕ್ಕೊಳಗಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಸಿಬಿಐ, ಬಳ್ಳಾರಿ, ಬಂಧನ, ಅಕ್ರಮ ಗಣಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಭಾರತೀಯ ಸುದ್ದಿ, ಕರ್ನಾಟಕ ರಾಜಕೀಯ, ಕನ್ನಡ ಆನ್