ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಕ್ಷಣಾ ಸಚಿವ ಸ್ಥಾನಕ್ಕೆ ಅಹ್ವಾನವಿತ್ತು- ಸಂಗ್ಮಾ
ಸಚಿವ ಸಂಪುಟದಲ್ಲಿ ರಕ್ಷಣಾ ಖಾತೆಯನ್ನು ವಹಿಸಿಕೊಳ್ಳುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ ಮುಖಂಡರು ತಮ್ಮನ್ನು ಒತ್ತಾಯಿಸಿದ್ದರು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಪಿ.ಎ. ಸಂಗ್ಮಾ ತಿಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‌ನ ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿ ರಕ್ಷಣಾ ಸಚಿವ ಸ್ಥಾನವನ್ನು ಅಲಂಕರಿಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಪಾಲುದಾರ ಸ್ಥಾನವನ್ನು ಹೊಂದುವಂತೆ ಒತ್ತಾಯಿಸಿದ್ದರು ಎಂದು ಸಂಗ್ಮಾ ಹೇಳಿದ್ದಾರೆ.

ಆದರೆ ತಮಗೆ ಕರೆ ಮಾಡಿದ ವ್ಯಕ್ತಿ ಯಾರು ಎನ್ನುವುದನ್ನು ಸಂಗ್ಮಾ ಬಹಿರಂಗಪಡಿಸಲು ನಿರಾಕರಿಸಿದರು.

ಭಾರತದ ಘನತೆಯನ್ನು ಎತ್ತಿಹಿಡಿಯಲು ಎಲ್ಲವನ್ನು ತ್ಯಾಗ ಮಾಡಿದ ವ್ಯಕ್ತಿಯನ್ನು ಯಾವುದೇ ಅಮಿಷಗಳಿಂದ ಬಂಧಿಸಲು ಸಾಧ್ಯವಿಲ್ಲ. ಮೇಘಾಲಯ ಪ್ರೋಗ್ರೆಸಿವ್ ಅಲಯನ್ಸ್ ಅಡಿಯಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳು ಒಂದಾಗಲಿವೆ ಎಂದು ಹೇಳಿದರು.

ಮತ್ತಷ್ಟು
ವಿಮಾನ ನಿಲ್ದಾಣ ನೌಕರರ ಮುಷ್ಕರ ಎರಡನೇ ದಿನಕ್ಕೆ
ಕರ್ವಾಲೋ ಅತ್ಯಾಚಾರಕ್ಕೆ ಸ್ಕಾರ್ಲೆಟ್ ಬಲಿ
ಶಸ್ತ್ರಾಸ್ತ್ರ ಖರೀದಿಗೆ 60 ಕೋಟಿ ರೂ ಮೀಸಲಿಟ್ಟ ನಕ್ಸಲರು
ಸ್ಕಾರ್ಲೆಟ್ ಕೊಲೆ ಪ್ರಕರಣ: ಸ್ಯಾಮ್ಸನ್ ತಪ್ಪೊಪ್ಪಿಗೆ
ಸಿನಿ ತಾರೆಯರ ಹೆಸರಲ್ಲಿ ಅಕ್ರಮ ವೀಸಾ ಜಾಲ
ಇನ್ನೊಂದು ಪ್ರಕರಣದಲ್ಲೂ ಜರ್ದಾರಿಗೆ ಮುಕ್ತಿ