ಇಂಡಿಯನ್ ಎಕ್ಸಪ್ರೆಸ್ ವರದಿಗಾರ್ತಿ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಎಂದು ಸಾಬೀತಾಗಿರುವ ನಾಲ್ವರ ವಿರುದ್ಧ ತ್ವರಿತ ನ್ಯಾಯಾಲಯವು ಬರುವ ಸೋಮವಾರ, ಮಾರ್ಚ್ 24 ರಂದು ಶಿಕ್ಷೆಯನ್ನು ಪ್ರಕಟಿಸಲಿದೆ.
ಶಿವಾನಿ ಭಟ್ನಾಗರ ಕೊಲೆ ಪ್ರಕರಣದ ಆರೋಪಿಯಾಗಿರುವ ಹರಿಯಾಣದ ಐಪಿಎಸ್ ಪೊಲೀಸ್ ಅಧಿಕಾರಿ ಆರ್ ಕೆ ಶರ್ಮಾ ಸೇರಿದಂತೆ ಮೂವರು ಅಪರಾಧಿಗಳು ಕೊಲೆಯಲ್ಲಿ ನೇರ ಸಂಬಂಧ ಹೊಂದಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ರಾಜೇಂದ್ರ ಶಾಸ್ತ್ರಿ ಎಕಸದಸ್ಯ ನ್ಯಾಯಪೀಠದ ಎದುರು ಸಿಬಿಐ ಪರ ವಾದಿಸಿದ ನ್ಯಾಯವಾದಿಗಳು ಆಪಾದಿತರಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ವಾದ ಮಾಡಿದರು. ಸುಮಾರು ಮೂರು ಗಂಟೆಗಳ ಕಾಲ ವಾದಿ ಪ್ರತಿವಾದಿಗಳ ನಡುವೆ ನಡೆದ ವಾದ-ವಿವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶರ ಶಿಕ್ಷೆಯನ್ನು ಸೋಮವಾರ ಪ್ರಕಟಿಸುವುದಾಗಿ ಹೇಳಿದರು.
|