ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್ ಅವರು ಸೋಮವಾರ ವಿಶ್ವಾಸ ಮತ ಗಳಿಸುವಲ್ಲಿ ಸೋತಿದ್ದು, ಈ ಹಿನ್ನೆಲೆಯಲ್ಲಿ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಮರಾನಾಥ ಮಂದಿರ ಮಂಡಳಿಗೆ ಅರಣ್ಯ ಭೂಮಿ ಹಸ್ತಾಂತರ ವಿವಾದಕ್ಕೆ ಸಂಬಂಧಿಸಿದಂತೆ, ಇದನ್ನು ವಿರೋಧಿಸಿ ಪಿಡಿಪಿ ಪಕ್ಷವು ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದು, ಇದರಿಂದಾಗಿ ಸರಕಾರ ಬಹುಮತದ ಕೊರತೆ ಎದುರಿಸುತ್ತಿತ್ತು.
ಸೋಮವಾರ ಮುಂಜಾನೆ ಶಾಸನ ಸಭೆಯಲ್ಲಿ ವಿಶ್ವಾಸಮತಯಾಚನೆ ಗೊತ್ತುವಳಿ ಮಂಡಿಸಿದ ಅಜಾದ್, ತನ್ನ ಸರಕಾರವು 'ಶುದ್ಧ ರಾಜಕೀಯದ' ಪರವಾಗಿದ್ದು, ಕುದುರೆ ವ್ಯಾಪಾರ ನಡೆಸದು ಎಂದು ನುಡಿದರು.
ಪಿಡಿಪಿಯ ಬೆಂಬಲ ಹಿಂತೆಗೆತದಿಂದ ಅಲ್ಪಸಂಖ್ಯಾತವಾದ ಸರಕಾರ ನಿರೀಕ್ಷೆಯಂತೆ ವಿಶ್ವಾಸ ಮತಗಳಿಸುವಲ್ಲಿ ಸೋತಿದ್ದು, ಈ ಹಿನ್ನೆಲೆಯಲ್ಲಿ ಅಜಾದ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರು.
|