ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚಂದ್ರಯಾನ-1 ಯಶಸ್ವಿ ಉಡ್ಡಯನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಂದ್ರಯಾನ-1 ಯಶಸ್ವಿ ಉಡ್ಡಯನ
WD
ಆಂಧ್ರಪ್ರದೇಶದ ಪೂರ್ವಕರಾವಳಿಯಲ್ಲಿನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ)ಚಂದ್ರಯಾನ-1 ನೌಕೆ ಬುಧವಾರ 6.22ರ ವೇಳೆ ಯಶಸ್ವಿಯಾಗಿ ಉಡ್ಡಯನಗೊಂಡಿದ್ದು, ಈ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲೇ ನೂತನ ಮೈಲಿಗಲ್ಲು ಸ್ಥಾಪಿಸಿದೆ.

ಉಡಾವಣೆಗೆ ಕೆಲಗಂಟೆಗಳ ಮುಂದೆ ಶ್ರೀಹರಿಕೋಟಾದಲ್ಲಿ ಮಳೆ ಸುರಿಯುತ್ತಿದ್ದಾರೂ ಈ ಬಗ್ಗೆ ವಿಜ್ಞಾನಿಗಳು ಹೆಚ್ಚು ಆತಂಕಗೊಂಡಿರಿರಲಿಲ್ಲ. ಆದರೆ, ಬಿರುಗಾಳಿ, ಗುಡುಗು ಮಿಂಚು ಬಂದರೆ ಯಾನವನ್ನೇ ಮುಂದೂಡಬೇಕೆನ್ನುವ ಆತಂಕವು ವಿಜ್ಞಾನಿಗಳಲ್ಲಿ ಮನೆ ಮಾಡಿತ್ತು. ಆದರೆ, ಚಂದ್ರಯಾನ-1 ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಉಡ್ಡಯನಗೊಂಡಿದ್ದು, ಭಾರತದ ಬಾಹ್ಯಾಕಾಶ ಪಾಲಿಗೆ ಈ ದಿನವನ್ನು ಸುವರ್ಣ ದಿನವನ್ನಾಗಿಸಿತು.

ಚಂದ್ರಯಾನ ಯೋಜನೆ ಯಶಸ್ವಿಯಾಗುವುದರ ಜೊತೆಗೆ ಭಾರತವು ಚಂದ್ರನ ಕುರಿತು ಸಂಶೋಧನ ಮಾಡಿರುವ ಬೆರಳೆಣಿಕೆಯ ರಾಷ್ಟ್ರಗಳಾಗ ರಶ್ಯಾ, ಅಮೆರಿಕ, ಜಪಾನ್, ಚೀನಾ ಮತ್ತು ಯುರೋಪ್ ದೇಶಗಳ ಸಾಲಿಗೆ ಸೇರಿದೆ.

ಈ ನೌಕೆಗೆ ಒಟ್ಟು 11 ಉಪಕರಣಗಳನ್ನು ಅಳವಡಿಸಿದ್ದು, ಇದರಲ್ಲಿ ಒಂದು ಉಪಕರಣ ಚಂದ್ರನ ಮೇಲಿಳಿಯಲಿದ್ದು, ಚಂದ್ರನ ಮೇಲ್ಮೈ ಕುರಿತು ಅಧ್ಯಯನ ಮಾಡಲಿದೆ. ಚಂದ್ರನ ಕಕ್ಷೆಯನ್ನು ಸುತ್ತಲಿರುವ ಚಂದ್ರಯಾನ-1 ಎರಡು ವರ್ಷ ಚಂದ್ರನ ಕುರಿತು ರೇಡಿಯೋ ತರಂಗಗಳ ರೂಪದಲ್ಲಿ ಮಾಹಿತಿ ರವಾನಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈ: ಭುಗಿಲೆದ್ದ ಹಿಂಸಾಚಾರ
ಇಂಫಾಲ್ ಬಾಂಬ್ ಸ್ಫೋಟಕ್ಕೆ 10 ಬಲಿ
ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಅಣುಸ್ಥಾವರ, ಬಂದರು
ರಾಜ್‌ಠಾಕ್ರೆಗೆ ನ.4ರ ತನಕ ನ್ಯಾಯಾಂಗ ಬಂಧನ
ಸಂತ್ರಸ್ತರ ಮುಖದಲ್ಲಿ ಸಂತಸದ ನಗೆಮಿಂಚು
ಬಿಜೆಪಿ ಸಂಸದ ಕತಾರ ಲೋಕಸಭೆಯಿಂದ ಉಚ್ಚಾಟನೆ