ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರ ಹಸ್ತಾಂತರ ಉಲ್ಲಂಘನೆ: ಸಭೆ
ಪೂರ್ವ ಒಪ್ಪಂದದಂತೆ ನಿಗದಿತ ದಿನಾಂಕ ಅಕ್ಟೋಬರ್ 3 ರಂದು ಅಧಿಕಾರ ಹಸ್ತಾಂತರ ಮಾಡದಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕರು ನಾಳೆ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ.

ಈ ಹಿಂದೆ 20 ತಿಂಗಳ ಆಡಳಿತದ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವ ಸಂಬಂಧ ಒಪ್ಪಂದವಾಗಿದ್ದರೂ ಜೆಡಿಎಸ್ ಕೊನೆ ಕ್ಷಣದಲ್ಲಿ ತನ್ನ ಒಪ್ಪಂದವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.

ಈ ನಡುವೆ ಬಿಜೆಪಿ ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರು ಕುಮಾರಸ್ವಾಮಿಯವರಿಗೆ ರಾಜೀನಾಮೆಯನ್ನು ನೀಡಿದ್ದು ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಳಿನ ದೆಹಲಿ ಸಭೆ ರಾಜ್ಯ ರಾಜಕಾರಣದ ಹೊಸ ಸಾಧ್ಯತೆಗೆ ನಾಂದಿ ಹಾಡಲಿದೆ.

ಮಂಗಳವಾರ ರಾತ್ರಿ ಸಾಮೂಹಿಕ ರಾಜೀನಾಮೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ಸರಿಯಾದ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಯಡಿಯೂಪ್ಪ ಹೇಳಿರುವುದು ಮೈತ್ರಿ ಸರ್ಕಾರದ ವೈಮನಸ್ಯಕ್ಕೆ ಸಾಕ್ಷಿಯಾಗಿದೆ.
ಮತ್ತಷ್ಟು
ಹೈಕಮಾಂಡ್ ತೀರ್ಮಾನ ಅಂತಿಮ : ದೇವೇಗೌಡ
ಕಾಂಗ್ರೆಸ್‌ನ ಕಾದು ನೋಡುವ ತಂತ್ರ
ಅನುದಾನ ರಹಿತ ಶಾಲೆಗೆ ಮಂಜೂರಾತಿ ಇಲ್ಲ
ಕೆಪಿಸಿಸಿ ಪುನಾರಚನೆ ?
ಗಡುವಿನ ಗೊಡವೆ ಬೇಕಿಲ್ಲ: ಮುಖ್ಯಮಂತ್ರಿ
ಕುಮಾರಸ್ವಾಮಿ ಇಂದೂ ರಾಜೀನಾಮೆ ಇಲ್ಲ