ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದತ್ತಪೀಠ: ಬಿಗಿ ಬಂದೋಬಸ್ತ್
ಬಹು ವಿವಾದಿತ ಚಿಕ್ಕಮಗಳೂರಿನ ದತ್ತಪೀಠಲ್ಲಿ ಸಂಕೀರ್ತನ ಯಾತ್ರೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಬಾರಿ ದತ್ತ ಪೀಠದ ಸಂಕೀರ್ತನೆ ಯಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡುವ ಬಗ್ಗೆ ಗೊಂದಲ ತಲೆ ದೋರಿದೆ.

ಕೋಮುಸೌಹಾರ್ದತಾ ವೇದಿಕೆ ಸಂಕೀರ್ತನಾ ಯಾತ್ರೆಗೆ ಅವಕಾಶ ನೀಡಬಾರದು ಎಂದು ಪಟ್ಟಿ ಹಿಡಿದಿದ್ದರೆ, ಸ್ಥಳೀಯ ಶಾಸಕ ಸಿಟಿ ರವಿ ನೇತೃತ್ವದ ಹಿಂದು ಸಂಘಟನೆಗಳ ನಾಯಕರು ದತ್ತಯಾತ್ರೆಯನ್ನು ನಡೆಸಿಯೇ ತೀರುತ್ತೇವೆ ಎಂದಿದ್ದಾರೆ.

ಯಥಾ ಸ್ಥಿತಿ ?

ಈ ನಡುವೆ ದತ್ತಪೀಠ ವಿಚಾರದಲ್ಲಿ 2004 ರಿಂದ ಈಚೆಗೆ ನಡೆದು ಕೊಂಡು ಬಂದ ಯಥಾಸ್ಥಿತಿಯನ್ನು ಈ ಬಾರಿಯೂ ಪಾಲಿಸಲಾಗುವುದು ಹಾಗೂ ಅಶಾಂತಿಗೆ ಅವಕಾಶ ಕೊಡುವುದಿಲ್ಲ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ತಿಳಿಸಿದ್ದಾರೆ.

ಯಥಾಸ್ಥಿತಿ ಪಾಲನೆ ಹೊರತು ಬೇರಾವುದೇ ಮಾತುಕತೆ ಇಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ನಾವೊಂದು ನಿರ್ದಿಷ್ಟ ನೀತಿಯನ್ನು ಅಳ ವಡಿಸಿಕೊಂಡಿದ್ದೇವೆ. ಆ ಬಗ್ಗೆ ಮತ್ತೊಮ್ಮೆ ಸಂವಾದಕ್ಕೆ ಆಸ್ಪದ ಇಲ್ಲ. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಸ್ಥಾಪಿಸುವುದು ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವುದು ನನ್ನ ಕೆಲಸ" ಎಂದಿದ್ದಾರೆ.
ಮತ್ತಷ್ಟು
ಬೃಹತ್ ಸಮಾವೇಶ:ಕಾಂಗ್ರೆಸ್ ಸಭೆ
ಮೈತ್ರಿ, ಚುನಾವಣೆ ಜೆಡಿಎಸ್ ನಿರ್ಧಾರ
'ರಾಜ್ಯ'ಕಾರಣ: ಎಂ.ಪಿ.ಪ್ರಕಾಶ್ ದೆಹಲಿಗೆ ದೌಡು
ಸಮ್ಮಿಶ್ರ ಸರಕಾರ ರಚನೆಗೆ ಪಕ್ಷೇತರರ ಆಸಕ್ತಿ
ದತ್ತಮಾಲಾ ಅಭಿಯಾನ:ಚಿಕ್ಕಮಗಳೂರಲ್ಲಿ ಬಿಗಿ ಭದ್ರತೆ
ಪುಸ್ತಕೋತ್ಸವ-2007 ಮುಕ್ತಾಯ