ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಅಧಿಕಾರಕ್ಕೆ ಒತ್ತಾಯಿಸಿ ಶಾಸಕರ ಪೆರೇಡ್
ಅಧಿಕಾರಕ್ಕೆ ಒತ್ತಾಯಿಸಿ ನಾಳೆ ದೆಹಲಿಯ ರಾಷ್ಟ್ತ್ರಪತಿ ಭವನದ ಎದುರು ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಪೆರೇಡ್ ನಡೆಸಲಿದ್ದಾರೆ.

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಲ್ಲಿಸಿ ಮೈತ್ರಿ ಸರ್ಕಾರ ರಚಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಇನ್ನೊಂದು ರೂಪವಾಗಿ ಈ ಪೆರೇಡ್ ನಡೆಯಲಿದೆ.

ಈ ಸಂಬಂಧ ವಿಶೇಷ ವಿಮಾನದಲ್ಲಿ ಇಂದು ರಾತ್ರಿ ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್‌ನ 129 ಶಾಸಕರು ದೆಹಲಿಗೆ ಪ್ರಯಾಣಿಸಲಿದ್ದಾರೆ.

ಗೊಂದಲ : ದೆಹಲಿಯಲ್ಲಿ ಎರಡೂ ಪಕ್ಷಗಳ ಶಾಸಕರು ಪೆರೇಡ್ ನಡೆಸುವ ಬಗ್ಗೆ ಗೊಂದಲ ತಲೆದೋರಿತ್ತು. ಈ ಸಂಬಂಧ ಜೆಡಿಎಸ್ ಅಸಮ್ಮತಿ ವ್ಯಕ್ತಪಡಿಸಿತ್ತು. ಶಾಸಕಾಂಗ ಪಕ್ಷದ ನಾಯಕನಾಗಿರುವ ತನ್ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಏಕಾಏಕಿ ಈ ರೀತಿಯ ಪ್ರತಿಭಟನೆಯನ್ನು ರಾಷ್ಟ್ರಪತಿಯೆದುರು ನಡೆಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ ಇಂದು ಮುಂಜಾನೆ ಕುಮಾರಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿ, ನಾಳೆ ದೆಹಲಿಯಲ್ಲಿ ನಡೆಯಲಿರುವ ಶಾಸಕರ ಪೆರೇಡ್‌ನಲ್ಲಿ ಜೆಡಿಎಸ್ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.
ಮತ್ತಷ್ಟು
ಧರಣಿ ಕೈಬಿಟ್ಟ ಬಿಜೆಪಿ, "ಪ್ರಜಾಸತ್ತೆ ಉಳಿಸಿ" ಆಂದೋಲನ
ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಜನಾಂದೋಲನ
ಮಧ್ಯಂತರ ಚುನಾವಣೆಯೊಂದೆ ಪರ್ಯಾಯ:ಸಿದ್ಧರಾಮಯ್ಯ
ಬಿಜೆಪಿಗೆ ಬೇಷರತ್ ಬೆಂಬಲ: ಕುಮಾರಸ್ವಾಮಿ
ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಬಸ್ ಸೌಕರ್ಯ
ಕಾಂಗ್ರೆಸ್ ಮೇಲೆ ಹರಿಹಾಯ್ದ ಗೌಡ