ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮತ್ತೆ ನಕ್ಸಲರ ಕರಪತ್ರಗಳು
ಇಲ್ಲಿನ ಪದವೀ ಪೂರ್ವ ಕಾಲೇಜು ಆವರಣದಲ್ಲಿ ಸಿಪಿಐ ಮಾವೋವಾದಿ ಸಂಘಟನೆಗೆ ಸಂಬಂಧಿಸಿದಂತೆ ಮತ್ತೆ ಭಿತ್ತಿ ಪತ್ರಗಳು ದೊರೆತಿವೆ.

ಕಾಲೇಜು ಎದುರಿನ ಮುಖ್ಯ ದ್ವಾರದ ಬಳಿ ಕರಪತ್ರವನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಈ ಕರಪತ್ರದಲ್ಲಿ ಹಿಂದೂ ಫ್ಯಾಸಿಸಂ ಬಯಲುಗೊಳಿಸಿ ತಿರುಗೇಟು ನೀಡಿ ಹಿಮ್ಮೆಟ್ಟಿಸೋಣ. ಸೌಹಾರ್ದ, ಸ್ವಾತಂತ್ರ್ಯ ಮೌಲ್ಯಗಳನ್ನು ಎತ್ತಿ ಹಿಡಿಯೋಣ ಎಂಬ ಬರಹ ಹೊಂದಿರುವ ನಾಲ್ಕು ಪುಟಗಳ ಕರಪತ್ರ ಇದಾಗಿದೆ.

ದಲಿತ ಹಿನ್ನೆಲೆಯೆ ಕೆಲವು ವ್ಯಕ್ತಿಗಳನ್ನು ಪುಸಲಾಯಿಸಿ, ಅವರಿಗೆ ಅಮಿಷ ತೋರಿ, ಪದವಿ ನೀಡಿ ಅವರ ಮೂಲಕ ಎಲ್ಲ ಜನರ ನಡುವೆ ಕೋಮು ವಿಷ ಬಿತ್ತಲು ಕೆಲವರು ಆರಂಭಿಸಿದ್ದಾರೆ ಎಂದು ಬಜರಂಗ ದಳದ ಮಹೇಂದ್ರ ಕುಮಾರ್, ಬಿಜೆಪಿಯ ಶಾಸಕರಾದ ಸಿ.ಟಿ.ರವಿ, ಸುನೀಲ್‌ಕುಮಾರ್, ಆರಗ ಜ್ಞಾನೇಂದ್ರ, ಕೆ.ಎಸ್. ಈಶ್ವರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಸದಾನಂದಗೌಡ ವಿರುದ್ಧ ಆಕ್ರೋಶವನ್ನು ನಕ್ಸಲರು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ
ರಾಜ್ಯೋತ್ಸವ ಪ್ರಶಸ್ತಿ : ಹಸ್ತಕ್ಷೇಪ
ಅಂತಿಮ ವರದಿ ಬಗ್ಗೆ ರಾಜ್ಯಪಾಲರ ಗುಟ್ಟು
ದೆಹಲಿಯಲ್ಲಿ ಬಿರುಸುಗೊಂಡ ಕರ್ನಾಟಕ ರಾಜಕೀಯ
ರಾಜ್ಯಪಾಲರಿಂದ ಪಾಟೀಲ್ ಭೇಟಿ
ರಾಜ್ಯ ರಾಜಕಾರಣ: ಕೇಂದ್ರ ನಿರ್ಧಾರ ಇಂದು