ರಾಷ್ಟ್ತ್ರಪತಿಗಳ ಮುಂದೆ ಪೆರೇಡ್ ನಡೆಸಲು ಬಿಜೆಪಿ ಹಾಗೂ ಜೆಡಿಯಸ್ ಶಾಸಕರು ತೆರಳಿರುವ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.
ರಾಜ್ಯಪಾಲರು ಸಂವಿಧಾನಾತ್ಮಕವಾಗಿ ನಿರ್ಧಾರ ಕೈಗೊಳ್ಳಲಿರುವ ಸಂದರ್ಭದಲ್ಲಿ ದೆಹಲಿಯಲ್ಲಿ ರಾಷ್ಟ್ತ್ರಪತಿಗಳ ಮುಂದೆ ತೆರಳಿ ಒತ್ತಡ ಹೇರುವುದರಿಂದ ರಾಜ್ಯ ರಾಜಕಾರಣದ ಬಗ್ಗೆ ಬೇರೆಯೇ ಸಂದೇಶ ರವಾನೆಯಾಗುತ್ತದೆ. ಶಾಸಕರು ದೆಹಲಿಗೆ ಹೋಗಬಾರದಿತ್ತು ಎಂದು ದೇವೇಗೌಡರು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆಂದು ತಿಳಿದಬಂದಿದೆ.
ಏತನ್ಮಧ್ಯೆ ಗೌಡರ ಪುತ್ರ ಮಾಜಿ ಸಚಿವ ರೇವಣ್ಣ ಬಹಿರಂಗವಾಗಿಯೇ ಇಂದು ದೆಹಲಿಗೆ ತೆರಳಿರುವ ಶಾಸಕರ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
|