ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರಸ್ವಾಮಿ ಹೊಸ ಪಕ್ಷ ಸ್ಥಾಪನೆ ಇಂಗಿತ
ತಂದೆ ದೇವೇಗೌಡರು ಉರುಳಿಸುವ ರಾಜಕೀಯ ದಾಳಗಳಿಂದಾಗಿ ಅಂತಿಮವಾಗಿ ಜನರ ಅಸಮಾಧಾನ ತಮ್ಮೆಡೆಗೆ ತಿರುಗುತ್ತಿದೆ ಎಂಬುದನ್ನು ಮನಗಂಡಂತಿರುವ ಮಾಜಿ ಮುಖ್ಯಮಂತ್ರಿ ಹೊಸತೊಂದು ಪ್ರಾದೇಶಿಕ ಪಕ್ಷವನ್ನು ಕಟ್ಟುವ ಇಂಗಿತವನ್ನು ಮಾಧ್ಯಮದವರ ಮುಂದೆ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಕುಮಾರಸ್ವಾಮಿಯವರು ಈ ಚಿಂತನೆ ನಡೆಸಿದ್ದು, ಈ ಕುರಿತು ದೇವೇಗೌಡರಿಗೆ ಅವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಮಾಜಿ ಪ್ರಧಾನಿ ದೇವೇಗೌಡ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಕಾಂಗ್ರೆಸ್‌ನೊಂದಿಗೆ ಮರು ಮೈತ್ರಿಯ ಸಾಧ್ಯತೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಆದರೆ ಇತ್ತ ರಾಜ್ಯದಲ್ಲಿ ಜೆಡಿಎಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಲೆ ದೋರಿದೆ.
ಮತ್ತಷ್ಟು
ಮಂಗಳೂರಿನಲ್ಲಿ ಐಶ್ – ಅಭಿ
ಕಾಂಗ್ರೆಸ್ ಬಾಗಿಲು ತಟ್ಟುವುದಿಲ್ಲ
ಮಾಟಮಂತ್ರಕ್ಕೆ ಹೆದರುವುದಿಲ್ಲ : ಯಡಿಯೂರಪ್ಪ
ವಿಪ್ ಜಾರಿ : ಚೆಲುವರಾಯಸ್ವಾಮಿ ಅಸಮಾಧಾನ
ಜೆಡಿಎಸ್ ಕುತಂತ್ರಕ್ಕೆತಕ್ಕ ಪಾಠ : ಬಿಜೆಪಿ
ವಿಧಾನಸಭೆ ವಿಸರ್ಜನೆ ಪರಿಹಾರ: ಸಿಪಿಎಂ