ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರ್ ಹೇಳಿಕೆಗೆ ಅನಂತ ಟೀಕೆ
ಐದು ಕೋಟಿ ರೂಪಾಯಿ ನೀಡಿ, ಆ ಅನಂತಕುಮಾರ್ ಮುಖದ ಮೇಲೆ ಎಸೆದು ಬಂದು ನಿಮ್ಮ ಪಕ್ಷ ಸೇರುತ್ತೇನೆ ಎಂದು ಯಡಿಯೂರಪ್ಪ ತಮ್ಮಲ್ಲಿ ಗೋಗರೆದ್ದಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಸಂಸದ ಅನಂತ ಕುಮಾರ್ ಅವರು ಕಟುವಾಗಿ ಟೀಕಿಸಿದ್ದಾರೆ.

ಕುಮಾರಸ್ವಾಮಿ ಹಾಗೂ ಅವರ ಬೆಂಬಲಿಗ ಶಾಸಕರು ರಾಜ್ಯಪಾಲರ ಹತ್ತಿರ ಹಾಗೂ ರಾಷ್ಟ್ರಪತಿಗಳ ಹತ್ತಿರ ಪರೇಡ್ ಮಾಡಿ ಬಿಜೆಪಿ ಸರಕಾರ ಬೆಂಬಲ ನೀಡುವುದಾಗಿ ಪ್ರಮಾಣಪತ್ರ ನೀಡಿದ್ದರು. ಅನಂತರ ವಚನವನ್ನೇ ಮುರಿದ ವಿಷಯ ಎಲ್ಲರಿಗೂ ತಿಳಿದಿದೆ.

ಕುಮಾರಸ್ವಾಮಿ ಅವರಿಗೆ ಸಾರ್ವಜನಿಕ ಜೀವನದಲ್ಲಿ ಬೆಲೆ ಇಲ್ಲ, ಅಂಥವರು ನೀಡಿದ ಹೇಳಿಕೆಯನ್ನು ಜನ ನಂಬುವುದಿಲ್ಲ ಎಂದರು.

ಎಲ್ಲಾ ಪಕ್ಷಗಳು ಜನತಾ ನ್ಯಾಯಾಲಯ ಎಂಬ ಶ್ರೇಷ್ಠ ನ್ಯಾಯಾಲಯದ ಮುಂದೆ ಹೋಗುವಾಗ ತಮ್ಮ ಸಾಧನೆ ಹಾಗೂ ಅಹವಾಲುಗಳನ್ನು ಜನತೆಯ ಮುಂದೆ ಪ್ರಸ್ತುತಪಡಿಸಬೇಕಾಗುತ್ತದೆ.

ಜನ ಪ್ರಜ್ಞಾವಂತರಾಗಿದ್ದು ಯಾರು ಏನು ಹೇಳುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವಷ್ಟು ಸಮರ್ಥರಾಗಿದ್ದಾರೆ. ನಮ್ಮನ್ನು ಮೋಸ ಮಾಡಬಹುದು ಆದರೆ ಜನರನ್ನು ಮೋಸ ಮಾಡಲು ಪದೇ ಪದೇ ಸಾಧ್ಯವಿಲ್ಲ ಎಂದು ಕಟುವಾಗಿ ಹೇಳಿದರು.
ಮತ್ತಷ್ಟು
ಅನರ್ಹತೆ ಅರ್ಜಿ: ಡಿ.1ಕ್ಕೆ ವಿಚಾರಣೆ
ಅರಣ್ಯ ಒತ್ತುವರಿ ಪತ್ತೆಗೆ ಉಪಗ್ರಹ ತಂತ್ರಜ್ಞಾನ ಬಳಕೆ
ಸಿಇಟಿ ಸೆಲ್ ಹೊಸರೂಪ ಕೆಇಟಿ
ಸುಪ್ರೀಂಕೋರ್ಟ್‌ಗೆ ಅಪಘಾತ ಪರಿಹಾರ ಅಕ್ರಮ ಪ್ರಕರಣ
ರಾಜ್ಯ ರೈತ ಸಂಘಕ್ಕೆ 25 ವರ್ಷ
ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು