ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಧಿತ ಉಗ್ರರಿಗೆ ಮತ್ತೆ ಮಂಪರು ಪರೀಕ್ಷೆ
ಪೊಲೀಸರ ವಶದಲ್ಲಿರುವ ಶಂಕಿತ ಲಷ್ಕರೆ-ಇ-ತೋಯ್ಬಾ ಉಗ್ರರಾದ ರಿಯಾಜುದ್ದೀನ್ ನಾಸಿರ್ ಮತ್ತು ಮೊಹಮ್ಮದ್ ಗೌಸ್ ಅವರುಗಳನ್ನು ನಗರದ ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ಮಂಪರು ಪರೀಕ್ಷೆಗೊಡ್ಡಲಾಗಿದೆ ಎಂದು ಸಿಒಡಿ ಐಜಿಪಿ ಅಜಯು ಕುಮಾರ್ ಸಿಂಗ್ ಹೇಳಿದ್ದಾರೆ. ಹಿಂದಿನ ಮಂಪರು ಪರೀಕ್ಷೆ ಸಂಪೂರ್ಣಗೊಳ್ಳದ ಕಾರಣ ಈ ಪರೀಕ್ಷೆ ಅವಶ್ಯಕವಾಗಿತ್ತು ಎಂಬುದಾಗಿ ಅವರು ತಿಳಿಸಿದರು.

"ಇಂದಿನ ಪರೀಕ್ಷೆ ಯಶಸ್ವಿಯಾಗಿದೆ. ರಾಜ್ಯದಲ್ಲಿ ಇವರ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ" ಎಂದು ಅವರು ನುಡಿದರಾದರೂ ಹೆಚ್ಚಿನ ಮಾಹಿತಿ ನೀಡಿಲ್ಲ.

ಗೋವಾದಿಂದ ದ್ವಿಚಕ್ರವಾಹನ ಕದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಹೈದರಾಬಾದಿನ ರಿಯಾಜುದ್ದೀನ್ ಮತ್ತು ಹೊಸಪೇಟೆಯ ಅಸುದ್ದುಲ್ಲಾ ಅಬೂಬಕ್ಕರ್ ಅವರುಗಳನ್ನು ಜನವರಿ 11ರಂದು ಬಂಧಿಸಲಾಗಿದೆ. ಇವರ ವಿಚಾರಣೆ ವೇಳೆಗೆ ಈ ಇಬ್ಬರಿಗೆ ಲಷ್ಕರೆ ಸಂಘಟನೆಯೊಂದಿಗೆ ಸಂಪರ್ಕ ಇರುವ ವಿಚಾರ ಬೆಳಕಿಗೆ ಬಂದಿತ್ತು.

ಈ ಇಬ್ಬರು ನೀಡಿದ ಮಾಹಿತಿಯಾಧಾರದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಾದ ಮೊಹಮ್ಮದ್ ಆಸಿಫ್ ಮತ್ತು ಮಿರ್ಝಾ ಬೇಗ್ ಅವರುಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಮತ್ತಷ್ಟು
'ಡರ್ಟಿ ಪೀಪಲ್': ಲಾಲೂ ಕ್ಷಮೆ ಯಾಚನೆಗೆ ಒತ್ತಾಯ
ಅಖಾಡಕ್ಕೆ ಮರಳಿದ ಕುಮಾರ್; 16ರಿಂದ ಪ್ರವಾಸ
ಠಾಕೂರ್ ಎತ್ತಂಗಡಿ ಕೇವಲ ವದಂತಿ: ಖರ್ಗೆ
ಇಂದಿರಾನಗರ ಕೊರಿಯರ್ ಕಚೇರಿಯಲ್ಲಿ ಬಾಂಬ್ ಪತ್ತೆ
ರಾಯಚೂರು ನಗರಸಭೆ: ಬಿಜೆಪಿಗೆ ಜೆಡಿಎಸ್ ಬೆಂಬಲ
ಲಾಲೂ ವಿರುದ್ಧ ಕರವೇ ಪ್ರತಿಭಟನೆ