ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿ.ಜಿ.ಆರ್ ಸಿಂಧ್ಯಾಗೆ ಗೇಟ್ ಪಾಸ್!  Search similar articles
ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್. ಸಿಂಧ್ಯಾ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಸ್ವತಃ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಸಿಂಧ್ಯಾ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎಂದು ರಾಜ್ಯ ಬಿಎಸ್ಪಿ ಕಚೇರಿ ತಿಳಿಸಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ತತ್ವಗಳಿಗೆ ಬೇಸತ್ತು ಬಿಎಸ್ಪಿಗೆ ಸೇರಿದ್ದ ಪಿಜಿಆರ್ ಸಿಂಧ್ಯಾ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿತ್ತು. ಈ ಮೂಲಕ ರಾಜ್ಯದ ಆಡಳಿತದಲ್ಲಿ ಬಿಎಸ್ಪಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಎಸ್ಪಿ ನಾಯಕರು ತಿಳಿಸಿದ್ದರು.

ಆದರೆ, ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗಳಿಸದೆ ಮುಖಭಂಗ ಅನುಭವಿಸಿತು. ಈ ಬೆಳವಣಿಗೆಯಿಂದ ರಾಜ್ಯ ಬಿಎಸ್ಪಿ ಘಟಕ ಬಗ್ಗೆ ಮಾಯಾವತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅಲ್ಲದೆ, ಚುನಾವಣಾ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಗೋಪಲ ಕೃಷ್ಣ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಲಾಗಿತ್ತು.
ಮತ್ತಷ್ಟು
ಅತುಲ್ 6 ದಿನ ಪೊಲೀಸ್ ವಶಕ್ಕೆ
ವಿಶೇಷ ಅಧಿವೇಶನಕ್ಕೆ ಕಾಶೆಂಪುರ್ ಆಗ್ರಹ
ಬಿಜೆಪಿಗೆ ಸಿದ್ದು ಅಗತ್ಯವಿಲ್ಲ: ಸದಾನಂದಗೌಡ
ಸದನದಲ್ಲಿ ಮುಗಿಯದ ರಸಗೊಬ್ಬರ ಗಲಾಟೆ
ಗೋಲಿಬಾರ್‌ಗೆ ಬಿಜೆಪಿ ಕಾರಣ: ಕುಮಾರಸ್ವಾಮಿ
ಅನನುಭವಿ ಮುಖ್ಯಮಂತ್ರಿ: ದೇವೇಗೌಡ