ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮತ್ತೊಂದು ಕಣ್ಣನ್ನೂ ಕಿತ್ತುಕೊಂಡ ಮುದುಕಪ್ಪ..
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೊಂದು ಕಣ್ಣನ್ನೂ ಕಿತ್ತುಕೊಂಡ ಮುದುಕಪ್ಪ..
ಇತ್ತೀಚೆಗಷ್ಟೇ ಒಂದು ಕಣ್ಣನ್ನು ಕಿತ್ತು ದೇವರಿಗೆ ಅರ್ಪಿಸಿ ಆಧುನಿಕ ಕಣ್ಣಪ್ಪ ಎನಿಸಿಕೊಂಡಿದ್ದ, ಇಲ್ಲಿನ ಅಡಗಲ್ ನಿವಾಸಿ ಮುದುಕಪ್ಪ ಕರಡಿ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತನ್ನ ಮತ್ತೊಂದು ಕಣ್ಣನ್ನು ಕಿತ್ತುಕೊಂಡು ತನ್ನ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿದ್ದಾನೆ.

ಬಾದಾಮಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುದುಕಪ್ಪ ಕರಡಿ ಮಂಗಳವಾರ ಬೆಳಗಿನ ಜಾವ 3 ಗಂಟೆಯ ಹೊತ್ತಿಗೆ ತನ್ನ ಇನ್ನೊಂದು ಕಣ್ಣನ್ನು ದಿಗಂಬರೇಶ್ವರ ಮಠದ ಸ್ವಾಮೀಜಿ ಅರ್ಪಣೆ ಎಂದು ಹೇಳಿ ಕಿತ್ತುಕೊಂಡಿದ್ದಾನೆ.

ಈ ಮೊದಲು ಆಗಸ್ಟ್ 28ರಂದು ತನ್ನ ಮೊದಲ ಕಣ್ಣನ್ನು ಕಿತ್ತುಕೊಂಡಿದ್ದ. ಇದೀಗ ಎರಡು ಕಣ್ಣು ಕೀಳುವ ಮೂಲಕ ಪುರಾಣದ ಬೇಡರ ಕಣ್ಣಪ್ಪನನ್ನು ಮೀರಿಸಿದ್ದಾನೆ. ಆದರೆ ಆಸ್ಪತ್ರೆ ಮೂಲಗಳ ಪ್ರಕಾರ, ಈತನೊಬ್ಬ ಮಾನಸಿಕ ಅಸ್ವಸ್ಥನಾಗಿದ್ದು, ಇದರಿಂದಾಗಿಯೇ ತನ್ನ ಕಣ್ಣನ್ನು ಕಿತ್ತುಕೊಂಡಿದ್ದಾನೆ. ಈತನನ್ನು ಈಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಏತನ್ಮಧ್ಯೆ ಮುದುಕಪ್ಪ ಕರಡಿಯ ಮನೆಯವರು ಆಸ್ಪತ್ರೆಯ ವೈದ್ಯರ ಮೇಲೆ ಗೂಬೆ ಕೂರಿಸುತ್ತಿದ್ದಾರೆಂದು ಆರೋಪಿಸಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಆತ ತನ್ನ ತ್ತೊಂದು ಕಣ್ಣನ್ನು ಕಿತ್ತುಕೊಂಡಿದ್ದಾನೆ ಎಂದು ಕುಟುಂಬಿಕರು ದೂರಿದ್ದಾರೆ.
ಮತ್ತಷ್ಟು
ಉಪಚುನಾವಣೆ-ತೃತೀಯರಂಗದ ಜತೆ ಮೈತ್ರಿ:ಗೌಡ
ಬಿಜೆಪಿ ವಿರುದ್ಧ ಜಿ.ಟಿ.ದೇವೇಗೌಡ ಅಸಮಾಧಾನ
ಉಪಚುನಾವಣೆ-ಸರ್ಕಾರ ಹಣ ಬಿಡುಗಡೆಗೆ ಜೆಡಿಎಸ್ ಆಕ್ಷೇಪ
ಆಪರೇಶನ್ ಹಸ್ತ: ಮೊಯ್ಲಿಗೆ ಸದಾನಂದ ಗೌಡ ಸವಾಲ್
ಬಿಹಾರ ಪ್ರವಾಹ-ರಾಜ್ಯದಿಂದ 10 ಕೋಟಿ ನೆರವು
ಅಕ್ಕ ಸಮ್ಮೇಳನ: ರಾಜ್ಯದ ಅಭಿವೃದ್ಧಿಗೆ ಸಿಎಂ ಕರೆ